ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಮನ್ಯು ಎಸ್. ಶೆಟ್ಟಿ ತೃತೀಯ ಬಹುಮಾನ

0

 

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಳ್ತಂಗಡಿಯ ವಾಣಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿ ಸಮನ್ಯು .ಎಸ್. ಶೆಟ್ಟಿ ತೃತೀಯ ಬಹುಮಾನ ಪಡೆದಿದ್ದಾರೆ.

 

ಇವರು ಸುಳ್ಯದ ಸುದರ್ಶನ ಕೃಷಿ ಏಜೆನ್ಸಿಸ್ ಮಾಲಕರಾದ ದಕ್ಷಿಣ ಬೀರಮಂಗಲದ ಸುದೀಶ್ ಕುಮಾರ್ ಶೆಟ್ಟಿ ಹಾಗೂ ಅಕ್ಷತಾ ಶೆಟ್ಟಿ ದಂಪತಿಗಳ ಪುತ್ರ. ಕರಾಟೆ ಶಿಕ್ಷಕರಾದ ಚಂದ್ರಶೇಖರ ಕನಕಮಜಲು ಇವರ ಶಿಷ್ಯ.