ಚೆಂಬು: ಕಾಳಜಿ ಕೇಂದ್ರದಿಂದ ಮನೆಗೆ ಹಿಂತಿರುಗಿದ ಕುಟುಂಬಗಳು

0

ತೀವ್ರ ಪ್ರಾಕೃತಿಕ ವಿಕೋಪದಿಂದಾಗಿ ಮನೆಯಲ್ಲಿ ವಾಸಿಸಲು ಸಾಧ್ಯವಾಗದೆ ಕಾಳಜಿ ಕೇಂದ್ರಕ್ಕೆ ಬಂದಿದ್ದ ಕುಟುಂಬಗಳು ಮಳೆಯು ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತೆ ಮನೆಯನ್ನು ಸೇರಿಕೊಂಡಿದ್ದಾರೆ.


ಆ.4ರಂದುಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಊರುಬೈಲು ಚೆಂಬು ಇಲ್ಲಿ ಕಾಳಜಿ ಕೇಂದ್ರವನ್ನು ತೆರೆದಿದ್ದು ಒಟ್ಟು 3 ಕುಟುಂಬ 9 ಜನರಿದ್ದು ಈ ಪೈಕಿ 2 ಕುಟುಂಬ 6ಜನ ಆ 12 ರಂದು ತೆರಳಿದ್ದು, ಆ. 17 ರಂದು ಉಳಿದ 01 ಕುಟುಂಬದ 03 ಜನ ಕಾಳಜಿ ಕೇಂದ್ರದಿಂದ ತೆರಳಿದ್ದಾರೆ. ಕುಟುಂಬಗಳು ಮನೆಗೆ ತೆರಳಿರುವುದರಿಂದ ಕಾಳಜಿ ಕೇಂದ್ರವನ್ನು ಮುಚ್ಚಲಾಗಿದೆ. ಈ ಸಂದರ್ಭ ಕಂದಾಯ ಪರಿವೀಕ್ಷಕರು ಗ್ರಾಮಲೆಕ್ಕಿಗರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯವರು ಹಾಜರಿದ್ದರು.