ಜಾಲ್ಸೂರು: ಗೋಳಿಕಟ್ಟೆ ಕೇಸರಿ ಬಳಗದವರಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಗವದ್ ಧ್ವಜಾರೋಹಣ

0

 

ಜಾಲ್ಸೂರಿನ ಗೋಳಿಕಟ್ಟೆಯಲ್ಲಿ ಕೇಸರಿ ಬಳಗದವರಿಂದ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಭಗವದ್ ಧ್ವಜಾರೋಹಣವನ್ನು ಆ.19ರಂದು ನೆರವೇರಿಸಲಾಯಿತು.
ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಮಾಜಿ ಗ್ರಾ.ಪಂ. ಅಧ್ಯಕ್ಷ ಅಶೋಕ ಅಡ್ಕಾರು ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಭರತ ಕೋನಡ್ಕಪದವು, ರೆದಿಶ್ ಬೇರ್ಪಡ್ಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ ಬೇರ್ಪಡ್ಕ, ಜಯರಾಮ ಕದಿಕಡ್ಕ ಸೇರಿದಂತೆ ಕೇಸರಿ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.