ನಿಸರ್ಗ ಯುವಕ ಮಂಡಲ ಐನೆಕಿದು ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 7ನೇ ವರ್ಷದ ಮೊಸರು ಕುಡಿಕೆ,ದಾರ್ಮಿಕ ಉಪನ್ಯಾಸ ಹಾಗು ಸ್ಪರ್ಧಾ ಕಾರ್ಯಕ್ರಮ ಆ.21ರಂದು ಐನೆಕಿದುವಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅದ್ಯಕ್ಷೆ ಶೀ ಮತಿ ಲಲಿತ ಗುಂಡಡ್ಕ ರವರು ಉದ್ಘಾಟಿಸಿದರು. ಅಜಿತ್ ಕಲ್ಲೇರಿ ಕಾರ್ಯಕ್ರಮದ ಅದ್ಯಕ್ಷ ತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭವಾನಿಶಂಕರ ಪೈಲಾಜೆ , ಭಾರತಿ ಮೂಕಮಲೆ, ಸೀತಾರಾಮ ಕಲ್ಲೇರಿ ವೇದಿಕೆಯಲ್ಲಿದ್ದರು. ಗಣರಾಜ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.