ಸ್ಪಂದನ ಗೆಳೆಯಯರ ಬಳಗ ಅಡ್ತಲೆ ಇದರ 4ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮ. ಅಡ್ತಲೆಯ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲಾ ವಠಾರ ದಲ್ಲಿ ನಡೆಯಿತು. ಬೆಳಿಗ್ಗೆ ಕಾರ್ಯಕ್ರಮವನ್ನು ಸ್ಪಂದನ ಗೆಳೆಯಯರ ಬಳಗದ ಗೌರವ ಸಲಹೆಗಾ ಭವಾನಿಶಂಕರ ಅಡ್ತಲೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅತಿಥಿಗಳಾಗಿ ಆರಂತೋಡು ಪಂಚಾಯತ್ ಉಪಾಧ್ಯಕ್ಷರಾದ ಕು. ಶ್ವೇತಾ ಅರಮನೆಗಯಾ, ಅಡ್ತಲೆ ಬೆದ್ರುಪಣೆ ಉಳ್ಳಾಕುಳು ಹಾಗೂ ಮಲೆ ದೈವಗಳ ದೈವಸ್ಥಾನದ ಅಧ್ಯಕ್ಷರಾದ ಎ. ಕೆ. ಹರೀಶ್ ನಾಗರೀಕ ಹಿತಾ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ ಮತ್ತು ನಿವೃತ್ತ ಶಿಕ್ಷಕರಾದ ಗಣೇಶ ಮಾಸ್ತರ್ ಅಡ್ತಲೆ ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಗೆ ಹಾಗೂ ಊರವರಿಗೆ ವಿವಿಧ ಸ್ಪರ್ಧೆಗಳು ನಡೆದು ಸಂಜೆ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.