ಸುಳ್ಯದ ಗೋಕುಲಂ ಮಕ್ಕಳ ಸಿದ್ಧ ಉಡುಪುಗಳ ಮಳಿಗೆ ಹಾಗೂ ರಂಗ ಮಯೂರಿ ಕಲಾ ಶಾಲೆಯ ಸಹಯೋಗದಲ್ಲಿ ಆ.15 ರಂದು ನಡೆದ ಶ್ರೀಕೃಷ್ಣ-ಯಶೋಧ, ರಾಧಾ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಆ.25 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಗಿರೀಶ್ ಪಾಲಡ್ಕ , ನವೀನ್ ಅಳಿಕೆ ,ಮಧು ಕಿರಣ್ , ಗುರುರಾಜ್ ಭಟ್ ,ಶಶಿಪ್ರಸಾದ್ ಕಾಟೂರು ,ಧೀರಜ್ ,ಕಾರ್ತಿಕ್ ಗೌಡ ,ವನಿತ, ಮಮತ, ಮನೋಹರ ಬೊಳ್ಳೂರು, ಚಂದ್ರಶೇಖರ ಉಬರಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಾದಂ ಫೂಟ್ ವೇರ್ ನ ಮ್ಯಾನೇಜಿಂಗ್ ಪಾರ್ಟ್ನರ್ ಚಿದಾನಂದ ವಿದ್ಯಾನಗರ ನಿರೂಪಿಸಿ, ಸ್ವಾಗತಿಸಿದರು, ಸುಳ್ಯ ಶ್ರೀಹರಿ ಬಿಲ್ಡಿಂಗ್ ನಲ್ಲಿ ರುವ ಪೊಪ್ಯುಲರ್ ಬೇಕರಿಯ ಮಾಲಕರಾದ ಅನೂಪ್ ಪೈ ಧನ್ಯವಾದ ಗೈದರು.
ಸ್ಪರ್ಧೆಯಲ್ಲಿ ಸುಮಾರು 80 ಕ್ಕೂ ಮಿಕ್ಕಿ ಚಿಣ್ಣರು ಹಾಗೂ ರಾಧೆಯರಾಗಿ ವೇಷ ಧರಿಸಿದ ಪೋಷಕರು ಭಾಗವಹಿಸಿದ್ದರು.
ಪೋಟೋ: N.S.photography