ಸೆ.30ರಂದು ಎಲಿಮಲೆಯಲ್ಲಿ ಮೈತ್ರೇಯ ಕ್ಲಿನಿಕ್ ಶುಭಾರಂಭ

0

 

ಎಲಿಮಲೆಯ ಪ್ರಸನ್ನ ಕಾಂಪ್ಲೆಕ್ಸ್ ನಲ್ಲಿಕಳೆದ 6 ವರ್ಷಗಳಿಂದ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ವೃತ್ತಿ ಮಾಡಿ ಅನುಭವ ಹೊಂದಿರುವ ಡಾ। ಚೈತ್ರಾಭಾನು ಅವರ
ಮೈತ್ರೇಯ ಕ್ಲಿನಿಕ್ ಸೆ.30 ರಂದು ಶುಭಾರಂಭಗೊಳ್ಳಲಿದೆ. ಕ್ಲಿನಿಕ್ ಅನ್ನು ಸುಳ್ಯ ತಾಲೂಕು ಆರೋಗ್ಯಧಿಕಾರಿ ಡಾ।ನಂದಕುಮಾರ್ ಬಾಳಿಕಲ ಉದ್ಘಾಟಿಸಲಿದ್ದಾರೆ. ನಿವೃತ್ತ ಉಪನ್ಯಾಸಕ ವಾಸುದೇವ ಗೌಡ ಪಡ್ಪು ಗೌರವ ಉಪಸ್ಥಿತಿ ಇರಲಿದ್ದು ಅತಿಥಿಗಳಾಗಿ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಬೊಳ್ಳಾಜೆ, ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಲೋಚನ ದೇವ, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆ ತೋಟ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂ ಅಧ್ಯಕ್ಷ
ವೆಂಕಟ್ ದಂಬೆಕೋಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.