ಸುಬ್ರಮಣ್ಯ ಗ್ರಾಮ ಪಂಚಾಯತ್ ನ ಕುಮಾರಧಾರ ಸಭಾಂಗಣದಲ್ಲಿ ಗ್ರಾಮ ಪಂಚಾಯತದ ಅಧ್ಯಕ್ಷೆ ಶ್ರೀಮತಿ ಲಲಿತ ಜಿ.ಗುಂಡಡ್ಕ ರವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆ ಇಂದು ನಡೆಯಿತು. ಗಾಂಧಿ ಭಾವಚಿತ್ರಕ್ಕೆಜ್ಯೋತಿ ಬೆಳಗಿಸಿ ಪುಷ್ಪಾರ್ಶಚನೆಯೊಂದಿಗೆ ಗ್ರಾಮ ಪಂಚಾಯತ್ ಅದ್ಯಕ್ಷರು ಗ್ರಾಮ ಸಭೆಗೆ ಚಾಲನೆ ನೀಡಿದರು.
ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಭಟ್ , ಸದಸ್ಯರಾದ ವೆಂಕಟೇಶ್ ಎಚ್.ಎಲ್., ಮಾಜಿ ಉಪಾಧ್ಯಕ್ಷರಾದ ರಾಜೇಶ್ ಎನ್.ಏಸ್, ಸದಸ್ಯ ನಾರಾಯಣ ಅಗ್ರಹಾರ ಮತ್ತಿತರರು ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರಾದ ಶ್ರೀಮತಿ ಸುಜಾತ ಗಣೇಶ್, ಎಂಬಿಕೆ ಹೇಮಾವತಿ ಸಂಜೀವಿನಿ ಒಕ್ಕೂಟದ ಪಧಾಧಿಕಾರಿಗಳು ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಘನತ್ಯಾಜ್ಯ ಘಟಕ ಸಿಬ್ಬಂದಿಗಳು ಮತ್ತು ಗ್ರಾಮಪಂಚಾಯಿತಿಗಳು ಮತ್ತು ವರ್ತಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು . ಮೋನಪ್ಪ ಡಿ.ಕಾರ್ಯಕ್ರಮ ನಿರೂಪಿಸಿದರು ವೆಂಕಟೇಶ್.ಎಚ್.ಎಲ್.ಸ್ವಾಗತಿಸಿ , ಸದಸ್ಯೆ ಶ್ರೀಮತಿ ಭಾರತಿ ದಿನೇಶ್ ವಂದಿಸಿದರು. ಲಯನ್ಸ ಕ್ಲಬ್ ಪ್ರಾಯೋಕತ್ವದಲ್ಲಿ ಸ್ವಚ್ಚತಾಹೀ ಸೇವಾ ಸ್ವಚ್ಚ ಶ್ರಮದಾನ ಸುಬ್ರಹ್ಮಣ್ಯ ಪೇಟೆಯಲ್ಲಿ ನಡೆಯಿತು.