ಅಂಜಲಿ ಅಕಾಡೆಮಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

0

ಅಂಜಲಿ ಅಕಾಡೆಮಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸಾಹಿತಿ ಹಾಗೂ ಪ್ರಸೂತಿ ತಜ್ಞರು ಶ್ರೀಮತಿ ವೀಣಾ.ಎನ್.  ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡಿದರು.

ಮಕ್ಕಳೆಲ್ಲರೂ ಕನ್ನಡದ ಕವಿ ಕವಿಯತ್ರಿಯರ ವೇಷ ಧರಿಸಿ ಅವರು ಬರೆದಂತಹ ವಚನಗಳು ಕವಿತೆಗಳನ್ನು ಹಾಡಿದರು. ಕೊನೆಯಲ್ಲಿ ಡಾಕ್ಟರ್ ರಾಜಕುಮಾರ್ ಅವರ ಪ್ರಸಿದ್ಧ ಹಾಡು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶುಭಾಕರ್ ಬಿ.ಸಿ., ಸಂಚಾಲಕರಾದ ಶ್ರೀಮತಿ ಗೀತಾಂಜಲಿ ಟಿ.ಜಿ.ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸೃಜನಾ ಬಿ ಎಸ್ ನೆರವೇರಿಸಿದರು.  ಪೋಷಕರು,ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಜೊತೆಯಾಗಿ ಕೋಟಿಕಂಠ ಗಾಯನದೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.