ನಿವೃತ್ತ ಪೋಲಿಸ್ ಅಧಿಕಾರಿ ಎಸ್.ಕೆ. ಕೋಟಿ ಮೂಲ್ಯ ನಿಧನ

0

ಕೊಡಗು ಸಂಪಾಜೆ ದಿ.ಕುಟ್ಟಿಮೂಲ್ಯರ ಪುತ್ರ ಕುಶಾಲನಗರ ನಂಜರಾಯಪಟ್ಟಣ ಮೂಲ ನಿವಾಸಿ ನಿವೃತ್ತ ಪೋಲಿಸ್ ಅಧಿಕಾರಿ ಎಸ್.ಕೆ.ಕೋಟಿ ಮೂಲ್ಯರವರು ನ.23 ರಂದು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 72 ವರುಷ ಪ್ರಾಯವಾಗಿತ್ತು.

ಕೊಡಗು ಜಿಲ್ಲೆಯಾದ್ಯಂತ ಪೋಲಿಸ್ ಇಲಾಖೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಭಡ್ತಿ ಹೊಂದುವ ಮೊದಲು ಅವರು ಗೃಹ ಮತ್ತು ಅರಣ್ಯ ಇಲಾಖೆಯಲ್ಲಿಯೂ ಸೇವೆಯನ್ನು ಸಲ್ಲಿಸಿದ್ದರೂ. ಉಡುಪಿಯ ಜಿಲ್ಲೆಯ ಕರಾವಳಿ ಮೀಸಲೂ ಪಡೆ ಇಲ್ಲಿ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದು. ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಇವರು ಪತ್ನಿ ಕೊಡಗೂ ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷೆ ಎಸ್.ಕೆ ಮುತ್ತಮ್ಮ ಮತ್ತು ಮಗ ಹಾಗೂ ಆಪಾರ ಬಂಧು ಬಳಗವನ್ನು ಅಗಲಿದ್ದಾರೆ.