ಸುಳ್ಯದಲ್ಲಿ ಪಯಸ್ವಿನಿ ಕೃಷಿ ಮೇಳ, ಚಪ್ಪರ ಮುಹೂರ್ತ – ಆಮಂತ್ರಣ ಬಿಡುಗಡೆ

0

ಡಿ.16,17 ಮತ್ತು 18 ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಪಯಸ್ವಿನಿ ಕೃಷಿ ಮೇಳ ನಡೆಯಲಿದ್ದು, ಇದರ ಚಪ್ಪರ ಮುಹೂರ್ತಕ್ಕೆ ಚಾಲನೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಡಿ.4 ರಂದು ನಡೆಯಿತು.

ಚೆನ್ನಕೇಶವ ದೇವಸ್ಥಾನದ ಅರ್ಚಕ ಕೃಷ್ಣಾನಂತ ಶರಳಾಯರ ನೇತೃತ್ವದಲ್ಲಿ ನಡೆದ ಚಪ್ಪರ ಮಹೂರ್ತದಲ್ಲಿ
ಕೃಷಿ‌ ಮೇಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಆರ್. ಪ್ರಸಾದ್ ರ ಅಧ್ಯಕ್ಷತೆ ವಹಿಸಿದ್ದರು.

ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ.ತೀರ್ಥರಾಮ, ನ.ಪಂ. ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಕೃಷಿ ಮೇಳ ವಿವಿಧ ಸಮಿತಿಗಳ ಸಂಚಾಲಕರಾದ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಡಾ.ಎನ್.ಎ.‌ಜ್ಞಾನೇಶ್, ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಚಂದ್ರಶೇಖರ ಪೇರಾಲು, ಗುರುದತ್ ನಾಯಕ್, ಜಯರಾಮ ಮುಂಡೋಳಿಮೂಲೆ, ಯಶ್ವಿತ್ ಕಾಳಮ್ಮನೆ, ದಿನೇಶ್ ಕೋಲ್ಚಾರ್, ಚಂದ್ರಶೇಖರ ನಂಜೆ, ಮಧುರಾ ಎಂ.ಆರ್., ಸೋಮಪ್ಪ ನಾಯ್ಕ, ವಿನುತಾ ಪಾತಿಕಲ್ಲು, ನೂಜಾಲು ಪದ್ಮನಾಭ ಗೌಡ, ಪಿ.ಎಂ. ರಂಗನಾಥ್, ಮಹೇಶ್ ಮೇನಾಲ, ರಾಮಣ್ಣ ಪೂಜಾರಿ ಪೊಡುಂಬ, ಪ್ರಣವ ಸಹಕಾರಿ ಸಂಘದ ಸುಳ್ಯ ಶಾಖಾ ವ್ಯವಸ್ಥಾಪಕಿ ಮನಸ್ವಿ, ರಂಜಿತ್ ಅಡ್ತಲೆ, ವಿನುತಾ ಮೊದಲಾದವರಿದ್ದರು.