ಎಲೆಯಲ್ಲಿ ಅರಳಿದ ಕೆ.ಆರ್.ಗಂಗಾಧರ್

0


ಸುಳ್ಯ ತಾಲೂಕು 26 ನೇ ಸಾಹಿತ್ಯ ಸಮ್ಮೇಳನ ಇಂದು ಸಂಪಾಜೆ ಗ್ರಾಮದ ಗೂನಡ್ಕ ಸಜ್ಜನ ಸಭಾಂಗಣದಲ್ಲಿ ನಡೆಯುತ್ತಿದೆ. ಈ ಸಮ್ಮೇಳನದ ಅಧ್ಯಕ್ಷರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿರುವ ಅರಂತೋಡು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಕೆ.ಆರ್.ಗಂಗಾಧರ್ ರವರು.
ತೊಡಿಕಾನ ಗ್ರಾಮದ ಕಾಡುಪಂಜದ ವಿದ್ಯಾರ್ಥಿ ಮನೀಶ್ ಕಾಡುಪಂಜ ಎಲೆಯಲ್ಲಿ ಕೆ.ಆರ್.ಜಿ.ಯವರ ಚಿತ್ರವನ್ನು ಕೊರೆದು ಪ್ರದರ್ಶಿಸುವ ಮೂಲಕ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಗೌರವ ಸಲ್ಲಿಸಿದ್ದಾನೆ. ಮನೀಶ್ ಕಾಡುಪಂಜ, ನಾಗೇಶ್ ಕಾಡುಪಂಜ ದಂಪತಿಯ ಪುತ್ರ.