ಅಜ್ಜಾವರ ಗ್ರಾಮದ ಅಡ್ಪಂಗಾಯ ದಲ್ಲಿ ಡಿ.9 ರಂದು ರಾತ್ರಿ 3 ಗಂಟೆ ಸುಮಾರಿಗೆ ಕಾಡಾನೆಗಳು ದಯಾನಂದ ಅಡ್ಪಂಗಾಯ ರ ತೋಟಕ್ಕೆ ನುಗ್ಗಿ ಕೃಷಿ ಹಾನಿಗೊಳಿಸಿವೆ.
12 ರಷ್ಟು ತೆಂಗಿನ ಮರ, ಬಾಳೆ, ಅಡಿಕೆ ಕೃಷಿ ಹಾನಿಗೊಂಡಿದೆ ಎಂದು ದಯಾನಂದರು ಮಾಹಿತಿ ನೀಡಿದ್ದಾರೆ.
ಅಜ್ಜಾವರದ ತುದಿಯಡ್ಕ, ಪಡ್ಡಂಬೈಲು, ಕರ್ಲಪ್ಪಾಡಿ ಮೊದಲಾದೆಡೆ ಆನೆಗಳ ಹಿಂಡು ತೋಟಕ್ಕೆ ಬಂದು ಕೃಷಿ ಹಾನಿಗೊಳಿಸುತ್ತಿವೆ. ಕಳೆದ ಎರಡು ವಾರದ ಹಿಂದೆ ಸುಳ್ಯ ನಗರದ ಭಸ್ಮಡ್ಕ, ನೆಲ್ಲಿ ಬಂಗಾರಡ್ಕ ನದಿಯ ಬದಿಯಲ್ಲಿ ಆನೆಗಳು ಹಿಂಡು ಇದ್ದವು.