ಸುಳ್ಯ ತಾಲೂಕು ಬಂಟರ ಸಂಘದ ಮಹಾಸಭೆ : ಪದಾಧಿಕಾರಿಗಳ ಆಯ್ಕೆ

0

ಎನ್.ಜಯಪ್ರಕಾಶ್ ರೈ ನೇತೃತ್ವದ ತಂಡ ಪುನರಾಯ್ಕೆ

ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಮಹಾಸಭೆಯು ಸುಳ್ಯದ ಬಂಟರ ಸಮುದಾಯ ಭವನದಲ್ಲಿ ಜ.15 ರಂದು ನಡೆಯಿತು.

ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ, ಕೋಶಾಧಿಕಾರಿ ಗಂಗಾಧರ್ ರೈ ಸೋಣಂಗೇರಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಕಮಲಾಕ್ಷಿ ಟೀಚರ್, ಅಧ್ಯಕ್ಷೆ ಇಂದಿರಾ ರಾಜಶೇಖರ ರೈ, ಯುವ ಘಟಕದ ಗೌರವಾಧ್ಯಕ್ಷ ಅಮೃತ್ ಕುಮಾರ್ ರೈ, ಅಧ್ಯಕ್ಷ ಪ್ರೀತಮ್ ರೈ ಬೆಳ್ಳಾರೆ ಹಾಗೂ ವಲಯಾಧ್ಯಕ್ಷರುಗಳು ವೇದಿಕೆಯಲ್ಲಿ ಇದ್ದರು.
ಸಂಘದ ದ ಚಟುವಟಿಕೆಗಳ ವರದಿ, ಲೆಕ್ಕಪತ್ರ ಮಂಡನೆಯಾಗಿ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆಗೆ ಅವಕಾಶ ನೀಡಲಾಯಿತು.

ಪದಾಧಿಕಾರಿಗಳ ಆಯ್ಕೆ :

ಈ ಬಾರೀ ಪದಾಧಿಕಾರಿಗಳ ಬದಲಾವಣೆಯಾದರೆ ಬೆಳ್ಳಾರೆ, ಬಾಳಿಲ ಭಾಗಕ್ಕೆ ಅಧ್ಯಕ್ಷತೆ ಅವಕಾಶ ನೀಡುವಂತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಬಂಟರ ಸಮುದಾಯ ಭವನ ಹೊಸದಾಗಿ ನಿರ್ಮಾಣವಾಗಿದ್ದು ಎನ್. ಜಯಪ್ರಕಾಶ್ ರೈ ಗಳ ನೇತೃತ್ವದ ತಂಡ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸಮುದಾಯ ಭವನದ ಕಮಿಟ್ ಮೆಂಟ್ ಇನ್ನೂ ಮುಗಿದಿಲ್ಲ. ಆದ್ದರಿಂದ ಇದೇ ತಂಡವನ್ನು ಮುಂದಿನ ಮೂರು ವರ್ಷದ ಒಂದು ಅವಧಿಗೆ ಮುಂದುವರಿಸೋಣ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.

ಪಿ.ಬಿ.ಸುಧಾಕರ ರೈ ನೆಟ್ ಕಾಮ್, ಕಮಲಾಕ್ಷಿ ಟೀಚರ್, ಶಶಿಧರ್ ಶೆಟ್ಟಿ ಪಡ್ಪು, ದಯಾಕರ ಆಳ್ವ, ಸುನೀಲ್ ರೈ ಪೆರುವಾಜೆ, ಎನ್.ಜಿ. ಪ್ರಭಾಕರ ರೈ, ಕರುಣಾಕರ ರೈ ಕುಕ್ಕಂದೂರು, ಗಂಗಾಧರ್ ರೈ ಸೋಣಂಗೇರಿ, ಸುಭಾಶ್ಚಂದ್ರ ರೈ ತೋಟ, ಮಹಾಬಲ ರೈ ಬೂಡು, ಜೆ.ಕೆ. ರೈ, ವೇದಾವತಿ ಶೆಟ್ಟಿ ಜಾಲ್ಸೂರು, ಅಮೃತ ಕುಮಾರ್ ರೈ, ಪ್ರವೀಣ ರೈ ಮರುವಂಜ ಮೊದಲಾದವರು ಪದಾಧಿಕಾರಿಗಳ ಆಯ್ಕೆಯ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕೆಲ ಸಮಯ ಚರ್ಚೆ ನಡೆದು ಎನ್.ಜಯಪ್ರಕಾಶ್ ರೈ ಯವರ ನೇತೃತ್ವದ ತಂಡವನ್ನು ಮುಂದುವರಿಸಲು ಸಭೆ ನಿರ್ಧರಿಸಿ, ಚಪ್ಪಾಳೆ ಮೂಲಕ ಅಂಗೀಕಾರ ಪಡೆಯಲಾಯಿತು.

ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ ವಂದಿಸಿದರು.