ಕರಿಕ್ಕಳ: ಕಾರು-ಸ್ಕೂಟರ್ ಅಪಘಾತ, ಸ್ಕೂಟರ್ ಸವಾರನಿಗೆ ಗಾಯ

0

ಪಂಜ ಸಮೀಪದ ಕರಿಕ್ಕಳದ ತಿರುವಿನಲ್ಲಿ ಕಾರು ಸ್ಕೂಟರ್ ಅಪಘಾತ ಸಂಭವಿಸಿದ್ದು ಸ್ಕೂಟರ್ ಸವಾರ ಗಾಯಗೊಂಡ ಘಟನೆ ಫೆ. 3ರಂದು ವರದಿಯಾಗಿದೆ.


ಸುಬ್ರಹ್ಮಣ್ಯ ಕಡೆ ಹೋಗುತ್ತಿದ್ದ ಬೆಂಗಳೂರಿನ ಚರಣ್ ಎಂಬವರು ಚಲಾಯಿಸುತ್ತಿದ್ದ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಉಮ್ಮರ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ರಾಜ್ಯ ಹೆದ್ದಾರಿಯ ಕರಿಕಳದ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಉಮ್ಮರ್ ರವರ ಕಾಲಿಗೆ ಗಾಯವಾಗಿದ್ದು. ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಬೇರೆ ಕಾರಿನಲ್ಲಿ ತೆರಳಿರುವುದಾಗಿ ತಿಳಿದು ಬಂದಿದೆ.