ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳಾದ ವಾಸುದೇವ ಮೇಲ್ಪಾಡಿ ಮತ್ತು ಪುರುಷೋತ್ತಮ ದುಗ್ಗಳ ರವರು MDRT ಸಾಧನೆ

0

ಭಾರತೀಯ ಜೀವ ವಿಮಾ ನಿಗಮ ಪುತ್ತೂರು ಶಾಖೆಯ ಪ್ರತಿನಿಧಿಗಳಾಗಿರುವ ಚಯರ್ ಮ್ಯಾನ್ ಕ್ಲಬ್ ಸದಸ್ಯರಾಗಿರುವ ವಾಸುದೇವ ಮೇಲ್ಪಾಡಿ ಮತ್ತು ಪುರುಷೋತ್ತಮ ದುಗ್ಗಳ
ಇವರುಗಳು MDRT ಸಾಧನೆ ಮಾಡಿ ಪುತ್ತೂರು ಎಲ್ಐಸಿ ಶಾಖೆಗೆ ಕೀರ್ತಿ ತಂದಿದ್ದಾರೆ. ಇವರುಗಳು ಅಮೆರಿಕದಲ್ಲಿ ನಡೆಯುವ ಜಾಗತಿಕ ಮಟ್ಟದ ವಿಮಾ ಸಮ್ಮೇಳನದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.
ಇವರುಗಳು 2006 ರಿಂದ ನಿರಂತರ ಶತಕ ವೀರರಾಗಿ, ದ್ವಿಶತಕ ವೀರರಾಗಿ , ಕೋಟಿ ಪತಿಗಳಾಗಿ ಸತತ ಸಾಧನೆ ಮಾಡಿರುತ್ತಾರೆ. ಎಲ್ಐಸಿ ವಿಮಾ ಕ್ಷೇತ್ರದಲ್ಲಿ ಪ್ರಾಮಾಣಿಕರಾಗಿ ಉತ್ತಮ ವ್ಯವಹಾರದೊಂದಿಗೆ ವಿಮಾ ಗ್ರಾಮ, ವಿಮಾ ಸ್ಕೂಲ್ ಗಳನ್ನು ಮಾಡಿರುತ್ತಾರೆ.2022 ಸಾಲಿನಲ್ಲಿ ವಿಶೇಷ ಸಾಧನೆ ಮಾಡಿದ ಇವರನ್ನು ಶಾಖೆಯಲ್ಲಿ ವಿಶೇಷವಾಗಿ ಗೌರವಿಸಲಾಗಿದೆ. ವಾಸುದೇವ ಮೇಲ್ಪಾಡಿ ಅವರು ಪಾಲಿಸಿದಾರರಿಗೆ ಸೇವೆ ನೀಡುವ ಸಲುವಾಗಿ ಪಂಜದಲ್ಲಿ ಪಾಲಿಸಿದಾರರ ಎಲ್ ಐ ಸಿ ಸೇವಾ ಕೇಂದ್ರ ಸ್ಥಾಪಿಸಿ ವಾಹನ ವಿಮೆ, ಆರೋಗ್ಯ ವಿಮೆ , ಪಾನ್ ಕಾರ್ಡ್ ಹಾಗೂ ಎಲ್ಲಾ ಆನ್ ಲೈನ್ ಸೇವೆಗಳನ್ನು ನೀಡುವ ಆಫೀಸ್ ಹೊಂದಿದ್ದಾರೆ. ಪುರುಷೋತ್ತಮ ದುಗ್ಗಳ ಇವರು ಈಶ್ವರಮಂಗಲದಲ್ಲಿ ಎಲ್ ಐ ಸಿ ಸೇವಾ ಕೇಂದ್ರ ಸ್ಥಾಪಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ.