ಸೇವಾಜೆ -ಮಾವಿನಗೋಡ್ಲು ಕಾಂಕ್ರೀಟು ರಸ್ತೆ ಉದ್ಘಾಟನೆ

0

ಸೇವಾಜೆ -ಮಾವಿನಗೋಡ್ಲು ಕಾಂಕ್ರೀಟು ರಸ್ತೆಯು 20 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡಿದ್ದು, ರಸ್ತೆ ಉದ್ಘಾಟನೆ ಮಾ.7ರಂದು ದೀಪ ಬೆಳಗಿಸುವ ಮೂಲಕ ನೆರವೇರಿತು. ಬಿಜೆಪಿಯ ಹಿರಿಯ ಕಾರ್ಯಕರ್ತ ನಾರಾಯಣ ಗೌಡ ಕುರುಂಜಿ ದೀಪ ಬೆಳಗಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಲಳಂಬೆ ರಿಬ್ಬನ್ ಕಟ್ಟು ಮಾಡುವ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೀನು ಗಾರಿಕ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಅಂಬೆಕಲ್ಲು ಹಾಗೂ ಕೃಷ್ಣಯ್ಯ ಮೂಲೆತೋಟ, ಗಣೇಶ್ ಕೇರ, ಸತೀಶ್, ಜಯಂತ್ ಹರ್ಲಡ್ಕ, ರಾಧಾಕೃಷ್ಣ ಮಾವಿನಗೋಡ್ಲು, ಹೊನ್ನಪ್ಪ ಗೌಡ ಹೊನ್ನಮೂಲೆ, ಉಮೇಶ್ ಹೊನ್ನಮೋಲೆ, ಗಂಗಾಧರ ಮಾವಿನಗೋಡ್ಲು, ಹೊನ್ನಪ್ಪ ಗೌಡ ಮಾವಿನಗೋಡ್ಲು, ಗುತ್ತಿಗೆದಾರರದ ಹರಿಪ್ರಸಾದ ಎಲಿಮಲೆ ಹಾಗೂ ರಸ್ತೆಯ ಫಲಾನುಭವಿಗಳು ಭಾಗವಸಿದರು. ರೋಹಿತ್ ಕುರುಂಜಿ ವಂದಿಸಿದರು.