ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವದ ಪೂರ್ವಭಾವಿ ಸಭೆ

0

ಶತಮಾನದ ನೆನಪಿಗೆ ಸಂಘದ ವತಿಯಿಂದ ನೂತನ ಸಭಾಭವನ ಹಾಗೂ ಪೆಟ್ರೋಲ್ ಬಂಕ್ ನಿರ್ಮಿಸಲು ನಿರ್ಧಾರ

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಮುಂದಿನ ವರ್ಷ ಶತಮಾನೋತ್ಸವ ಆಚರಿಸಲಿದ್ದು ಇದರ ಪೂರ್ವಭಾವಿ ಸಭೆ ಮಾ. 18ರಂದು ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು. ಸೊಸೈಟಿಯ ಅಧ್ಯಕ್ಷ ಹರ್ಷ ಕುಮಾರ್ ದೇವಜನ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.


ಶತಮಾನೋತ್ಸವ ಅಂಗವಾಗಿ ಪ್ರಧಾನ ಕಛೇರಿ ಮೇಲ್ಬಾಗ ನೂತನ ಸಭಾಭವನ ಹಾಗೂ ಸಂಘದ ವತಿಯಿಂದ ಹರಿಹರ ಪೇಟೆಯಲ್ಲಿ ಪೆಟ್ರೋಲ್ ಬಂಕ್ ಮಾಡುವ ಬಗ್ಗೆ ನಿರ್ಧರಿಸಲಾಯಿತು.

ವೇದಿಕೆಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಶೇಖರ ಅಂಬೆಕಲ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ನಿರ್ದೇಶಕರುಗಳಾದ ವಿನೋಪ್ ಮಲ್ಲಾರ, ಮಣಿಕಂಠ ಕೊಳಗೆ, ತಾರಾನಾಥ ಮುಂಡಾಜೆ, ಮೋನಪ್ಪ ಕೊಳಗೆ, ಗಿರೀಶ್ ಕಟ್ಟೆಮನೆ, ಸುರೇಶ ಚಾಳೆಪ್ಪಾಡಿ, ರಾಜೇಶ್ ಪರಮಲೆ, ವಿಜಯ ಕೂಜುಗೋಡು, ವಿಜಯ ಕಜ್ಜೋಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೂವಪ್ಪ ಗೌಡ ಕೆ, ಆಂತರಿಕ ಲೆಕ್ಕ ಪರಿಶೋಧಕ ಜನಾರ್ದನ ಗುಂಡಿಹಿತ್ಲು ವೇದಿಕೆಯಲ್ಲಿದ್ದರು. ಚಂದ್ರಕಲಾ ಅವರು ಪ್ರಾರ್ಥಿಸಿದರು. ಹರ್ಷಕುಮಾರ್ ದೇವಜನ ಪ್ರಸ್ತಾವಿಕವಾಗಿ ಮಾತನಾಡಿದರು. ಅನಂತರಾಮ ಮಣಿಯಾನ ಮನೆ ಸ್ವಾಗತಿಸಿ, ವಂದಿಸಿದರು.