ಮೊಗರ್ಪಣೆ ಎಸ್ಎಸ್ಎಫ್ ಯೂನಿಟ್ ವತಿಯಿಂದ ರಂಜಾನ್ ಕಿಟ್ ವಿತರಣೆ

0

ಎಸ್ ಎಸ್ ಎಫ್ ಮೊಗರ್ಪಣೆ ಯೂನಿಟ್ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ದಾನಿಗಳಿಂದ ಸಂಗ್ರಹಿಸಿದ ಧನ ಸಹಾಯದಿಂದ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮ ಮೊಗರ್ಪಣೆ ಮಸೀದಿ ವಠಾರದಲ್ಲಿ ನಡೆಯಿತು.


ಸೈಯದ್ ಜೈನುಲ್ ಆಬಿಧೀನಿ ತಂಗಳ್ ಜಯನಗರ ದುವಾ ನೆರವೇರಿಸಿದರು. ಎಸ್ ವೈ ಎಸ್ ಸಮೀತಿ ಮುಖಂಡ ಬಶೀರ್ ಸಕಾಫಿ ಜಯನಗರ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ ವೈ ಎಸ್ ಮೊಗರ್ಪಣೆ ಯುನೀಟ್ ಅಧ್ಯಕ್ಷ ಯಾಕೂಬ್ ಸಅದಿ,ಕರ್ನಾಟಕ ಮುಸ್ಲಿಂ ಜಮಾಅತ್ ಮೊಗರ್ಪಣೆ ಯೂನಿಟ್ ಅಧ್ಯಕ್ಷ ಹಸೈನಾರ್ ಜಯನಗರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಫ್ ಎಫ್ ಸುಳ್ಯ ಡಿವಿಜನ್ ಕಾರ್ಯದರ್ಶಿ ಸಮೀರ್ ಡಿ ಹೆಚ್, ಮೊಗರ್ಪಣೆ ಯುನಿಟ್ ಸಮಿತಿ ಸದಸ್ಯರಾದ ಶರೀಫ್ ಜಯನಗರ, ಆಸಿಫ್
ಜಯನಗರ, ಮಿಸ್ಬ್ಹ ಜಯನಗರ, ಅಫ್ಲಹ್ ಸಅದಿ,ಶಮೀರ್, ರಾಝಿಕ್ ಜಯನಗರ ಮೊದಲಾದ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಅತ್ತಾಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್ ಎಸ್ ಎಫ್ ಡಿವಿಜನ್ ವತಿಯಿಂದ ತಸ್ಬಿಹ್ ಕೌಂಟರ್ ಮತ್ತು ಸಂಘಟನೆಯ ಐಡಿ ಕಾರ್ಡ್ ವಿತರಣೆ ನಡೆಯಿತು.
ಪ್ರಧಾನ ಕಾರ್ಯದರ್ಶಿ ತೌಫಿಕ್ ಜಯನಗರ ಸ್ವಾಗತಿಸಿ ವಂದಿಸಿದರು.
ಆಹಾರ ಸಾಮಗ್ರಿಗಳ ಕಿಟ್ಟನ್ನು ಫಲಾನುಭವಿಗಳ ಮನೆ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.