ತೊಡಿಕಾನ : ನಾಗನಮೂಲೆ-ಕಡವೆಪಳ್ಳ-ಬಾಳಕಜೆ ಪಂಚಾಯತ್ ರಸ್ತೆಯ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ

0

ತೊಡಿಕಾನ ಗ್ರಾಮದ ನಾಗನಮೂಲೆ ಕಡವೆಪಳ್ಳ- ಬಾಳೆಕಜೆ ಪಂಚಾಯತ್ ರಸ್ತೆಗೆ ರೂ. ೨ ಲಕ್ಷ ಪಂಚಾಯತ್ ಅನುದಾನದಲ್ಲಿ ಕಾಂಕ್ರೀಕರಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ ಜ. ೧೮ ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ಸಹಕಾರ ಸಂಘದ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಭವಾನಿ ಸಿ.ಎ., ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ ಪಂಜಿಕೋಡಿ, ಗುತ್ತಿಗೆದರಾದ ತಿಲಕ್ ರಾಜ್, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯ ಪಲಾನುಭವಿಗಳು ಹಾಜರಿದ್ದರು. ಜನಾರ್ಧನ ಬಾಳೆಕಜೆ ಸ್ವಾಗತಿಸಿ, ವಂದಿಸಿದರು.