ಎಡಮಂಗಲ: ಗ್ರಾಮ ದೈವ, ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

0

ಎಡಮಂಗಲ ಗ್ರಾಮ ದೈವ ಶಿರಾಡಿ ರಾಜನ್ ದೈವಾ ಹಾಗೂ ಪರಿವಾರ ದೈವಗಳ ನೇಮೋತ್ಸವವು ಜ.18 ಮತ್ತು 19ರಂದು ನಡೆಯಿತು .ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪೂರ್ವಶಿಷ್ಟ ಸಾಂಪ್ರದಾಯದಂತೆ ಮರೋಳಿ ಕದಿಕೆ ಚಾವಡಿಯಲ್ಲಿ ಸನ್ನಿಧಿಯಲ್ಲಿ ಜ.18ರಂದು ಎಡಮಂಗಲ ದೇವಳದ ಅರ್ಚಕ ತಂಡ ಸ್ವಸ್ತಿ ಪುಣ್ಯಾಹ, ಗಣಪತಿ ಹವನ ,ಕಲಶ ಪೂಜೆ, ಕಲಾಭಿಷೇಕ , ತಂಬಲ ಸೇವೆ, ನಾಗತಂಬಿಲ ಸೇವೆ ನಡೆಸಿಕೊಟ್ಟರು.


19 ರಂದು ಬೆಳಿಗ್ಗೆ ಶಿರಾಡಿ ರಾಜನ್ ದೈವದ ನೇಮ ಕೂಡುಕಟ್ಟಿಗೆ ಅಭಯ ನುಡಿ ಮತ್ತು ಕಾಣಿಕೆ ಪ್ರಸಾದ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀ ಹರಿ ನೂಚಿಲ, ಸದಸ್ಯರಾದ ಸೀತಾರಾಮಯ್ಯ ನೂಚಿಲ , ರಾಮಕೃಷ್ಣ ರೈ ಮಾಲಿಂಗೇರಿ, ರವೀಂದ್ರ ದೇರಳ, ಗಿರೀಶ್ ನಡುಬೈಲು ,ಬಾಲಕೃಷ್ಣ ಬಳಕ್ಕಜೆ, ಭವಾನಿ ಪರ್ಲ, ಪ್ರಿಯಾಂಕ ಪುಳಿಕುಕ್ಕು ಕೂಡುಕಟ್ಟಿನ ಭಕ್ತಾದಿಗಳು ಉಪಸ್ಥಿತರಿದ್ದರು.