ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ ಮಾಡಿದ ಯುವಕ ಮಹೇಶ್ ಅಟ್ಲೂರು

0

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನ ಮಹೇಶ್ ಎಂಬ ಯುವಕ ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕಳೆದ ಒಂದು ವರ್ಷದಿಂದ ತನ್ನ ಕೂದಲನ್ನು ಆರೈಕೆ ಮಾಡಿ ಬೆಳೆಸಿದ್ದ ಕೂದಲನ್ನು ಕತ್ತರಿಸಿ ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಮೂಲಕ ಅಮೃತ ಕೇಶ ಕೂದಲು ದಾನ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಮಹೇಶ್ ರವರು ರಥಬೀದಿಯಲ್ಲಿರುವ ರೋಟರಿ ಶಾಲೆಯ ಬಳಿ ವಿಘ್ನೇಶ್ ಇಲೆಕ್ಟ್ರಿಕಲ್ಸ್ ನ್ನು ನಡೆಸಿಕೊಂಡು ಬರುತ್ತಿದ್ದಾರೆ.