ಮುರುಳ್ಯ : ಬಾವಿಗೆ ಬಿದ್ದು ಮೃತ್ಯು

0

ವ್ಯಕ್ತಿಯೋರ್ವರು ಬಾವಿಗೆ ಬಿದ್ದು ಮೃತಪಟ್ಟ ಮುರುಳ್ಯ ಗ್ರಾಮದ ನೆಕ್ಕರೆ ಎಂಬಲ್ಲಿ ಘಟನೆ ಇಂದು ಸಂಭವಿಸಿದೆ.

ಕೊಳಂಬಲ ನೆಕ್ಕರೆ ಚೆನ್ನಣ್ಣ ಗೌಡ ಬಾವಿಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ.
ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮನೆಯ ಅಂಗಳದಲ್ಲಿದ್ದ ಬಾವಿ ಕಾಂಪೌಂಡ್ ರಹಿತವಾಗಿದ್ದು, ಚೆನ್ನಣ್ಣ ಗೌಡರು ಬೆಳಿಗ್ಗೆ ನೀರು ಸೇದಲು ಹೋಗಿ ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.


10 ವರ್ಷಗಳ ಹಿಂದೆ ಇವರ ಪತ್ನಿ ನಿಧನರಾದ ಬಳಿಕ ಚೆನ್ನಣ್ಣರವರು ಒಬ್ಬರೇ ಮನೆಯಲ್ಲಿದ್ದು, ಅವರ ತಮ್ಮ ಪದ್ಮಯ್ಯ ಗೌಡರು ಆಗಾಗ್ಗೆ ಬಂದು ಹೋಗುತ್ತಿದ್ದರು. ಮೂರು ದಿನಗಳಿಂದ ಅವರು ಬಂದಿರಲಿಲ್ಲ. ಪಶು ನಾಟಿ ವೈದ್ಯರಾಗಿರುವ ಇವರು ಮುರುಳ್ಯದಲ್ಲಿ ಜನಾನುರಾಗಿದ್ದರು. ಕೊಳಂಬಳ ಮನೆತನದ ಹಿರಿಯ ಸದಸ್ಯರು. ಮೃತರು ಪುತ್ರ ಜಯಂತ, ಸುಬ್ರಹ್ಮಣ್ಯ, ಲಕ್ಷ್ಮಣ ಸಕಲೇಶಪುರ, ಪುತ್ರಿಯರಾದ ಪುಷ್ಪಲತಾ ಬಿರ್ಮುಕಜೆ, ಜಲಜ ಹೆತ್ತೂರು, ಸೊಸೆಯಂದಿರು, 8 ಮಂದಿ ಸಹೋದರರು, ಕುಟುಂಬಸ್ಥರನ್ನು ಅಗಲಿದ್ದಾರೆ.