ನಕ್ಸಲರು ನಮ್ಮ ಮನೆಗೆ ಬಂದಿದ್ದಲ್ಲ. ತೋಟದ ಮೂಲೆ ಅಶೋಕರ ಮನೆಗೆ : ಅಶೋಕ್ ಕೂಜುಗೋಡು ಸ್ಪಷ್ಟನೆ

0

ಮಾ. 23 ರಂದು ಐನೆಕಿದು ಗ್ರಾಮಕ್ಕೆ ನಕ್ಸಲರು ಬಂದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಹಲವರು ತಪ್ಪಾಗಿ ನಮ್ಮ ಮನೆಗೆ ಪೋನ್ ಮಾಡುವುದು, ಮನೆಗೆ ಬರುವುದು ಮಾಡುತ್ತಿದ್ದಾರೆ. ಆದರೆ ನಕ್ಸಲರು ಬಂದಿರುವುದು ತೋಟದಮೂಲೆಯಲ್ಲಿರುವ ಕೆ.ಪಿ.ಅಶೋಕ್ ಕೂಜುಗೋಡು ಅವರ ಮನೆಗೆ. ನಮ್ಮ ಮನೆಗಲ್ಲ. ಯಾರೂ ತಪ್ಪು ತಿಳಿದುಕೊಂಡು ನಮ್ಮನ್ನು ಸಂಪರ್ಕಿಸುವುದು ಬೇಡ” ಎಂದು ಐನೆಕಿದು ಗ್ರಾಮದ ಅಶೋಕ್ ಕೂಜುಗೋಡು ಅವರು ತಿಳಿಸಿದ್ದಾರೆ.

ಸುದ್ದಿ ವರದಿಯಲ್ಲಿ ತೋಟದಮೂಲೆ ಅಶೋಕ್ ಕೂಜುಗೋಡು ಅವರ ಮನೆಗೆ ನಕ್ಸಲರು ಬಂದಿರುವುದೆಂದು ಸ್ಪಷ್ಟವಾಗಿ ಬರೆದಿದ್ದರೂ, ಅದೇ ಗ್ರಾಮದ ಇನ್ನೋರ್ವ ಪ್ರಮುಖರಾದ ಅಶೋಕ್ ಕೂಜುಗೋಡು ರವರಿಗೆ ಫೋನ್ ಕರೆಗಳು ಹೋಗುತ್ತಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಪ್ರಕಟಿಸಲಾಗಿದೆ.