ಬೆಳಗಾವಿಯಲ್ಲಿ ಕಾಯರ್ತೋಡಿ ಬಿ.ಜೆ.ಪಿ. ಕಾರ್ಯಕರ್ತರಿಂದ ಮತ ಯಾಚನೆ

0


ಬೆಳಗಾವಿ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಜಗದೀಶ್ ಶೆಟ್ಟರ್‌ರವರ ಪರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಸುಳ್ಯ ಕಾಯರ್ತೋಡಿಯ ಬಿ.ಜೆ.ಪಿ. ಕಾರ್ಯಕರ್ತರಿಂದ ಎ.29 ರಂದು ನಗರ ಹಾಗೂ ಬಡವಾವಣೆ ವ್ಯಾಪ್ತಿಯಲ್ಲಿ ಮತ ಯಾಚನೆ ಮಾಡಲಾಯಿತು.


ಸುಳ್ಯ ನಗರ ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ ಕುಸುಮಾಧರ ಎ.ಟಿ. ಹಾಗೂ ಕಾಯರ್ತೋಡಿಯ ಕಾರ್ಯಕರ್ತರು ಭಾಗವಹಿಸಿದ್ದರು. ಇವರೊಂದಿಗೆ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಧನಂಜಯ ಜಾಧವ್, ಮಹಾ ಶಕ್ತಿಕೇಂದ್ರ ಉಚ್ಚಿಗಾವ್ ಅಧ್ಯಕ್ಷರಾದ ಪ್ರತೀಪ್ ಪಾಠೀಲ್, ಗ್ರಾ.ಪಂ. ಉಪಾಧ್ಯಕ್ಷರಾದ ಕಲ್ಲಪ್ಪ ಪಾಠೀಲ್, ಶಕ್ತಿಕೇಂದ್ರ ಪ್ರಮುಖ್ ಸಾಗರ್ ಪಾಠೀಲ್, ಬೂತ್ ಅಧ್ಯಕ್ಷರಾದ ರಾಜೀವ್ ಪಾಠೀಲ್ ಮೊದಲಾದವರು ಸಹಕರಿಸಿದ್ದರು.