ಸುಳ್ಯ: ಪರಿವಾರಕಾನದಲ್ಲಿ ಹೋಟೆಲ್ ವೃಷಭ ಶುಭಾರಂಭ

0

ಸುಳ್ಯದ ರಾಜ್ಯ ಹೆದ್ದಾರಿಯ ಪರಿವಾರಕಾನ ಎಂಬಲ್ಲಿ ವಿನೋದ್ ಸರಳಿಕುಂಜ ರವರ ಮಾಲಕತ್ವದ ಹೋಟೆಲ್ ವೃಷಭ ಮೇ.3 ರಂದು ಶುಭಾರಂಭ ಗೊಂಡಿತು.

ಬೆಳಗ್ಗೆ ಅರ್ಚಕ ಶಿವಪ್ರಸಾದ್ ಕೆದಿಲಾಯ ನಾಗಪಟ್ಟಣ ರವರ ನೇತೃತ್ವದಲ್ಲಿ ಗಣಪತಿ ಹವನ ನೆರವೇರಿತು. ಹಿರಿಯರಾದ ಶ್ರೀಮತಿ ವೀಣಾವತಿ ಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಲೆಟ್ಟಿ ಪಂಚಾಯತ್ ಸದಸ್ಯ ರತೀಶನ್ ಅರಂಬೂರು ರವರು ಶುಭ ಹಾರೈಸಿದರು. ಜಯರಾಮ ಶಾಂತಿನಗರ, ಶಿವಾನಂದ ಉಪ್ಪಳ, ಶ್ರೀಮತಿ ವಿಜಯಶ್ರೀ, ಶ್ರೀಮತಿ ವಾಣಿಶ್ರೀ ಹಾಗೂ ಬಂಧು- ಮಿತ್ರರು ಉಪಸ್ಥಿತರಿದ್ದರು.


ನೂತನವಾಗಿ ಶುಭಾರಂಭವಾಗಿರುವ ಹೋಟೆಲ್ ನಲ್ಲಿ
ಮಾಂಸಹಾರಿ ಮತ್ತು
ಸಸ್ಯಹಾರಿ ಊಟ ಉಪಹಾರದ ವ್ಯವಸ್ಥೆ ಇದೆ. ಬಾಳೆ ಎಲೆಯಲ್ಲಿ ಮೀನು ಊಟ ಲಭ್ಯವಿದೆ. ಅಲ್ಲದೆ ನೀರ್ ದೋಸೆ, ಇಡ್ಲಿ, ಸಾದ ದೋಸೆ, ಪುಂಡಿ, ರೊಟ್ಟಿ, ಸೇಮಿಗೆ ,ಕಲ್ತಪ್ಪ, ನೈಪತ್ತಲ್, ವೆಳ್ಳಪ್ಪಮ್ ಮುಂತಾದ ಗ್ರಾಮೀಣ ಭಾಗದ ಆಹಾರ ಪದಾರ್ಥಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದರು.