ಕುಕ್ಕನ್ನೂರು ಶ್ರೀ ಕಿನ್ನಿಮಾಣಿ -ಪೂಮಾಣಿ ದೈವಗಳ ಕಾಲಾವಧಿ ಉತ್ಸವ

0

ಕಿರಿಯರ ನೇಮ ಹಾಗೂ ನಾಯರ್ ದೈವದ ನೇಮ – ಹರಿಕೆ ಕಾಣಿಕೆ ಸ್ವೀಕಾರ

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಗಳ ಕಾಲಾವಧಿ ಉತ್ಸವವು ಮೇ.1ರಂದು ಬೆಳಿಗ್ಗೆ ಮುಂಡೈಗೆ ಶೃಂಗಾರದೊಂದಿಗೆ ಪ್ರಾರಂಭಗೊಂಡಿದ್ದು, ರಾತ್ರಿ ದೇವರ ಪೂಜೆ ನಡೆಯಿತು.

ಮೇ2ರಂದು ಪೂರ್ವಾಹ್ನ ಪೂರ್ವ ಸಂಪ್ರದಾಯದಂತೆ ಗುರುಮಾಳ್ಯದಲ್ಲಿ ಗಣಪತಿ ಹೋಮ ನಡೆಯಿತು. ಬಳಿಕ ಕಟ್ಟಮುಚ್ಚಿರು ಮಾಡದಲ್ಲಿ ಧ್ವಜಾರೋಹಣ, ರಾತ್ರಿ ಗುರುಮಾಳ್ಯ ಚಾವಡಿಯಲ್ಲಿ ಸಂಕ್ರಮಣ ವಾಲಸಿರಿ ಕೊಡಿಬಂಡಿ ಉತ್ಸವ ಜರುಗಿತು.

ಮೇ3ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

ಮೇ.4ರಂದು ಬೆಳಗ್ಗಿನ ಜಾವ 3 ಗಂಟೆಯಿಂದ ನಡುಬಂಡಿ ಉತ್ಸವ ಹಾಗೂ ಸಿಡಿಮದ್ದು ಪ್ರದರ್ಶನ ನಡೆಯಿತು.

ಮೇ.4ರಂದು ಬೆಳಿಗ್ಗೆ ಕಿರಿಯರ ನೇಮ, ಬಳಿಕ ನಾಯರ್ ದೈವದ ನೇಮ, ಹರಿಕೆ ಕಾಣಿಕೆ ಸ್ವೀಕಾರ ನಡೆಯಿತು.


ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಎಸ್. ಎನ್. ಬಾಲಕೃಷ್ಣ ಗೌಡ ನಡುಬೆಟ್ಟು, ದೈವದ ಪ್ರಧಾನ ಅರ್ಚಕ ಸುಭಾಷ್ ರೈ ಕುಕ್ಕನ್ನೂರು, ಆಡಳಿತ ಮಂಡಳಿಯ ಸದಸ್ಯರುಗಳಾದ ಪುಟ್ಟಣ್ಣ ಗೌಡ ಹುಲಿಮನೆ, ಎಸ್.ಎನ್. ರುಕ್ಮಯ್ಯ ಗೌಡ ನಡುಮನೆ, ದೇವಿಪ್ರಸಾದ್ ಗೌಡ ನೆಕ್ರಾಜೆ, ವೆಂಕಟ್ರಮಣ ಭಟ್ ಬೊಮ್ಮೆಟ್ಟಿ, ಗಂಗಾಧರ ಆಚಾರ್ಯ, ಚಿನ್ನಯ್ಯ ಆಚಾರ್ಯ ಕುಕ್ಕನ್ನೂರು, ಶೇಷಪ್ಪ ರೈ ಕುಕ್ಕನ್ನೂರು, ಸತೀಶ್ ಕೊಮ್ಮೆಮನೆ, ಗಂಗಾಧರ ರೈ ಸೋಣಂಗೇರಿ ಸೇರಿದಂತೆ ಕುಕ್ಕನ್ನೂರು ಹದಿನಾರು ಒಕ್ಕಲು ಹಾಗೂ ಸೋಣಂಗೇರಿ ಹತ್ತು ಒಕ್ಕಲಿನ ಪದಾಧಿಕಾರಿಗಳು, ಊರ – ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಮೇ‌.5ರಂದು ಬೆಳಿಗ್ಗೆ ವಾಲಸಿರಿ ಕಡೆಬಂಡಿ ಉತ್ಸವ, ಹಿರಿಯರ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಆರಾಟ , ಧ್ವಜಾವರೋಹಣ, ಅಂಬುಕಾಯಿ , ಹಣ್ಣುಕಾಯಿ ನಡೆಯಲಿದೆ.