ಬೊಮ್ಮಾರಿನಲ್ಲಿ ಹೊನಲು‌ ಬೆಳಕಿನ ಕ್ರಿಕೆಟ್ ಪಂದ್ಯಾಟ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರು ಶ್ರೀ ಗಜಾನನ ಮಿತ್ರ ಮಂಡಳಿ ಇವರಿಂದ 30 ಗಜಗಳ ಹೊನಲು ಬೆಳಕಿನ 7 ಜನರ ಮುಕ್ತ ಅಂಡರ್ ಆಮ್೯ ಕ್ರಿಕೆಟ್ ಪಂದ್ಯಾಟವು ಬೊಮ್ಮಾರಿನ ಶ್ರೀ ಮೂವರ್ ದೈವಸ್ಥಾನದ ವಠಾರದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಜಾನನ ಮಿತ್ರ ಬಳಗದ ಅಧ್ಯಕ್ಷರಾದ ನಿತೀಶ್ ಎರ್ಮೆಟ್ಟಿ ವಹಿಸಿದ್ದರು.

ಕಾರ್ಯಕ್ರಮವನ್ನು ಭಾರತೀಯ ಯೋದ ಚಂದ್ರಶೇಖರ ಕುದ್ಕುಳಿ ದೀಪ ಬೆಳಗಿಸಿ ಉದ್ಘಾಟಿಸಿದರು.

ವೇದಿಕೆಯಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಶ್ರೀ ಮೂವರ್ ದೈವಸ್ಥಾನದ ಅಧ್ಯಕ್ಷ ದಿನೇಶ್ ಬೊಮ್ಮಾರು, ಕಾರ್ಯದರ್ಶಿ ಯತೀಶ್ ಪೊನ್ನೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಂದ್ರ ಬೊಮ್ಮಾರು ಸ್ವಾಗತಿಸಿ, ಜೀವನ್ ತುಂಬೆತ್ತಡ್ಕ ವಂದಿಸಿದರು.

ಐತ್ತ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ನಯನ ಎಲಿಮಲೆ ಕ್ರಿಕೆಟ್ ಪಂದ್ಯಾಟದ ವೀಕ್ಷಕ ವಿವರಣೆ ಮಾಡಿದರು.