ಅರಂತೋಡು : ಹಜ್ ಯಾತ್ರಾರ್ಥಿ ಖಾದರ್ ಪಠೇಲ್ ರವರಿಗೆ ಬೀಳ್ಕೊಡುಗೆ

0

ಅರಂತೋಡು ಬದ್ರಿಯಾ ಜಮಾ ಅತ್ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಜಮಾ ಅತ್‌ನ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಪಠೇಲ್‌ರವರಿಗೆ ಬೀಳ್ಕೊಡುಗೆ ಸಮಾರಂಭವು ಮೇ. 4ರಂದು ಅಧ್ಯಕ್ಷ ಅಶ್ರಫ್ ಗುಂಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅರಂತೋಡು ಜುಮಾ ಮಸೀದಿಯ ಖತೀಬರಾದ ಬಹು ಇಸ್ಮಾಯಿಲ್ ಫೈಝಿ ಯವರ ದುವಾಶ್ರಿರ್ವಚನದೊಂದಿಗೆ ಹಜ್ ಯಾತ್ರಿಕರನ್ನು ಬೀಳ್ಕೊಡಲಾಯಿತು. ನಿವೃತ ಉಪನ್ಯಾಸಕರಾದ ಅಬ್ದುಲ್ ಮಾಸ್ತರ್, ಸಹಾಯಕ ಅದ್ಯಾಪಕ ಮೋಹಮ್ಮದ್ ಅಶ್ರಫ್ ಮುಸ್ಲಿಯಾರ್ ಶುಭಹಾರೈಸಿದರು.

ಜಮಾಅತ್‌ನ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್ , ದಿಕ್ರ್ ಸ್ವಲಾತ್ ಉಪಾಧ್ಯಕ್ಷ ಇಬ್ರಾಹಿಂ ಕುಕ್ಕಂಬಳ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್, ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ, ನಿರ್ದೇಶಕರುಗಳಾದ ಕೆ.ಎಂ ಮೋಯಿದು, ಎ ಹನೀಫ್, ದಿಕ್ರ್ ಸ್ವಲಾತ್ ಕಾರ್ಯದರ್ಶಿ ಸಂಶುದ್ದೀನ್‌ ಕೆ.ಎ.ಯು, ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ತಾಲೂಕು ವಿಕಾಯ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಹಾಜಿ ಅಬ್ದುಲ್ ರಜಾಕ್ ಅಡಿಮರಡ್ಕ ,ಹಾಜಿ ಆಝರುದ್ಧೀನ್, ಕೆ.ಎಂ ಉಸ್ಮಾನ್, ಜವಾದ್ ಪಾರೆಕ್ಕಲ್, ಆಶೀಕ್ ಅರಂತೋಡು, ಸಿನಾನ್ ಕುಂಣ್ಣಿಲ್, ಕಬೀರ್ ಸೆಂಟ್ಯಾರ್, ಮೊಹಿಸಿನ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ ಎಂ ಮುಸಾನ್ ಸ್ವಾಗತಿಸಿ ನಿರೂಪಿಸಿದರು.