ನಾಳೆ ಸುಳ್ಯದಲ್ಲಿ ದಿ. ಕೆ. ಉಪೇಂದ್ರ ಕಾಮತ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ಬಿಜೆಪಿಯ ಹಿರಿಯ ನಾಯಕ ಹಾಗೂ ಹಿರಿಯ ಉದ್ಯಮಿ ದಿ. ಕೆ. ಉಪೇಂದ್ರ ಕಾಮತ್ ಅವರು ಮೇ.6ರಂದು ವಿಧಿವಶರಾಗಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಮೇ.8ರಂದು ನಾಳೆ ಬೆಳಿಗ್ಗೆ ಜರುಗಲಿದೆ.

ದಿ. ಕೆ. ಉಪೇಂದ್ರ ಕಾಮತ್ ಅವರು ಸುಳ್ಯದ ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ಗೇರುಬೀಜ ಕಾರ್ಖಾನೆ ಮತ್ತು ವಿವೇಕಾನಂದ ವಿದ್ಯಾಸಂಸ್ಥೆಯ ಸ್ಥಾಪಕರಾಗಿದ್ದು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಹಾಗೂ ಉದ್ಯಮ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ್ದರು.