ಸುಳ್ಯದಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ

0

ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕಾರ

ಲೋಕಾಯುಕ್ತದ ವತಿಯಿಂದ ಜನ ಸಂಪರ್ಕ ಸಭೆಯು ಇಂದು ಸುಳ್ಯ ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆಯಿತು.

ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ. ಕುಮಾರ್, ಲೋಕಾಯುಕ್ತ ಇನ್ ಸ್ಪೆಕ್ಟರ್ ಗಳಾದ ಅಮಾನುಲ್ಲಾ ಖಾನ್, ಸುರೇಶ್ ಬಾಬು ಸಹಿತ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿದರು.

ಸುಳ್ಯ ತಹಶೀಲ್ದಾರ್ ಜಿ. ಮಂಜುನಾಥ್, ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಪರಮೇಶ್, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

ಸರಕಾರಿ ಕಚೇರಿಗಳಲ್ಲಿ ಆಗುತ್ತಿರುವ ವಿಳಂಬ , ತೊಂದರೆ ಸಹಿತ ಹಲವು ವೈಯಕ್ತಿಕ ಹಾಗೂ ಸಮುದಾಯ ಸಮಸ್ಯೆಗಳ ಕುರಿತು ದೂರು ಅರ್ಜಿಗಳನ್ನು ಸಲ್ಲಿಸಲಾಯಿತು.

ಕನಕಮಜಲು ಗ್ರಾಮದ ಸರಣಿ ಕಳ್ಳತನ ಪ್ರಕರಣ, ನಗರದಲ್ಲಿ‌ನಡೆಯುವ ಅಮೃತ್ 2 ಕಾಮಗಾರಿ ಅಸಮರ್ಪಕತೆ, ಜೆಜೆಎಂ ಕಾಮಗಾತಿ ಅಸಮರ್ಪಕ ಇತ್ಯಾದಿ ಸಮಸ್ಯೆ ಕುರಿತು ದೂರು ಅರ್ಜಿ ಸಲ್ಲಿಕೆಯಾದವು.