ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಬೆಳ್ಳಾರೆ ವಾರ್ಷಿಕ ಮಹಾಸಭೆ, ನೂತನ ಸಮಿತಿ ರಚನೆ

0

ಬೆಳ್ಳಾರೆಯ ಸ್ನೇಹ ಸದನ ಸಭಾಂಗಣದಲ್ಲಿ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಚೀಮುಳ್ಳು ಇವರ ಅಧ್ಯಕ್ಷತೆಯಲ್ಲಿ ಮೇ 6ರಂದು ಜರುಗಿತು. 2023-24 ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಪದ್ಮನಾಭ ಚೂoತಾರು, ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಆನಂದ ಗೌಡ ಪಡ್ಪು ಸಭೆಗೆ ಮಂಡಿಸಿದರು,ಸಭೆಯು ಸರ್ವಾನುಮತದಿಂದ ಅಂಗೀಕಾರ ನೀಡಿತು.

ಬಳಿಕ ಮುಂದಿನ ವರ್ಷಕ್ಕೆ ಸಿದ್ದಪಡಿಸಿದ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಲಾಯಿತು ನಂತರ 2024-25 ಅವಧಿಗೆ ನೂತನ ಸಮಿತಿಯನ್ನು ರಚನೆ ಮಾಡಲಾಯಿತು ಅಧ್ಯಕ್ಷರಾಗಿ ಚಂದ್ರಹಾಸ ಮಣಿಯಾಣಿ ಪಡ್ಪು, ಕಾರ್ಯದರ್ಶಿ ವಸಂತ ಗೌಡ ಪಡ್ಪು ಕೋಶಾಧಿಕಾರಿಯಾಗಿ ತೀರ್ಥರಾಮ ಗುಡ್ಡೆಮನೆ ಮಣಿಮಜಲು ಉಪಾಧ್ಯಕ್ಷರು ನಾರಾಯಣ ಪಾಟಾಳಿ ಬಸ್ತಿಗುಡ್ಡೆ ಜತೆ ಕಾರ್ಯದರ್ಶಿ ಜನಾರ್ಧನ ಪೂಜಾರಿ ಚೀಮುಳ್ಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿವಾಸ ಕುರುಂಬುಡೇಲು,ಚಂದ್ರಶೇಖರ ಗೌಡ ಪಿಲಿಕಜೆ, ಶಶಿಧರ ಮಣಿಯಾಣಿ ಬೀಡು, ಚೆನ್ನಪ್ಪ ಕಾವಿನಮೂಲೆ, ಮಾಧವ ಪುಡ್ಕಜೆ, ಪದ್ಮನಾಭ ಚೂಂತಾರು ಇವರುಗಳನ್ನು ಆಯ್ಕೆ ಮಾಡಲಾಯಿತು.

ನಿಕಟಪೂರ್ವಧ್ಯಕ್ಷ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ ಚುನಾವಣಾಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು, ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ ಉಪಸ್ಥಿತರಿದ್ದರು. ಚಂದ್ರಶೇಖರ ಪನ್ನೆ ಸ್ವಾಗತಿಸಿ, ಶಶಿಧರ ಮಣಿಯಾಣಿ ವಂದಿಸಿದರು, ಆನಂದ ಗೌಡ ಪಡ್ಪು ಕಾರ್ಯಕ್ರಮ ನಿರೂಪಿಸಿದರು.