ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಯಶಸ್ವಿನಿ ಆನೆ ಆರೋಗ್ಯವಾಗಿದೆ- ಅಪಪ್ರಚಾರ ಮಾಡುತ್ತಿದ್ದಾರೆ : ಕಾರ್ಯನಿರ್ವಹಣಾಧಿಕಾರಿ ಡಾl ನಿಂಗಯ್ಯ ಸ್ಪಷ್ಟನೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿನಿ ಅಸೌಖ್ಯತೆಯಿಂದ ಇರುವುದಾಗಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ರವರ ಹೇಳಿಕೆ ಆಧರಿಸಿ ಮಾಧ್ಯಮದಲ್ಲಿ ವರದಿಯಾಗಿದ್ದು, ಇದು ಸುಳ್ಳು ವರದಿಯಾಗಿರುತ್ತದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಡಾl ನಿಂಗಯ್ಯ ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನದ ಯಶಸ್ವಿನಿ ಆನೆಗೆ ಅಸೌಖ್ಯತೆಯಿಲ್ಲ. ಸರ್ಕಾರದ ನಿರ್ದೇಶನದ ಮೇರೆಗೆ 10 ದಿನಗಳ ಹಿಂದೆ ಶಿವಮೊಗ್ಗದ ವೈದ್ಯ ಡಾ. ವಿನಯ್ ಎಂಬವರು ಬಂದು ಆನೆ ಆರೋಗ್ಯ ಪರಿಶೀಲಿಸಿದ್ದಾರೆ. ಅವರು ಆರೋಗ್ಯದಿಂದಿರುವುದಾಗಿ ವರದಿ ನೀಡಿದ್ದಾರೆ. ಯಾರೂ ಆನೆಯ ಆರೋಗ್ಯದ ಬಗ್ಗೆ ಆತಂಕಪಡಬೇಕಾಗಿಲ್ಲ.
ದುರುದ್ದೇಶದಿಂದ ಷಡ್ಯಂತರ ಮಾಡಲಾಗುತ್ತಿದೆ. ನಮ್ಮ ಆನೆಯನ್ನು ಮಾವುತರು ಚೆನ್ನಾಗಿ ನೋಡಿಕೊಳ್ಳುತಿದ್ದಾರೆ ಎಂದು ಡಾl ನಿಂಗಯ್ಯರವರು ಸುದ್ದಿಗೆ ತಿಳಿಸಿದ್ದಾರೆ.