ಬಾಳಿಲ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ

0

ಮೊಹಿಯುದ್ದೀನ್ ಜುಮ್ಮಾ ಮಸೀದಿ ಅತ್ತಿಕರಮಜಲು ಜಮಾಅತ್ ವ್ಯಾಪ್ತಿಯಲ್ಲಿರುವ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭವು ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮೇ.10 ರಂದು ನಮಾಜ್ ನಂತರ ನಡೆಯಿತು.

ಈ ವರ್ಷ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಮೊಹಿಯುದ್ದೀನ್ ಜುಮ್ಮಾ ಮಸೀದಿ ಇದರ ಉಪಾಧ್ಯಕ್ಷರಾದ ಶರೀಫ್ ಭಾರತ್ ಬಾಳಿಲ ಹಾಗೂ ಅಬ್ದುಲ್ಲ ಆರಂಡ ಇವರನ್ನು ಸ್ಮರಣಿಕೆ ಹಾಗೂ ಶಾಲು ಹೊದಿಸುವ ಮೂಲಕ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಇಸಾಕ್ ಸಾಹೇಬ್ ಗೌರವಿಸಿದರು.

ಮಸೀದಿ ಖತೀಬರಾದ ಬಹು ಯಾಸಿರ್ ಅರಾಫತ್ ಕೌಸರಿ ದುವಾ ನೆರವೇರಿಸಿದರು.ಈ ಸಂಧರ್ಭದಲ್ಲಿ ಜಮಾಅತ್ ಕಮೀಟಿ ಸದಸ್ಯರು ಹಾಗೂ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.