ಕನಕಮಜಲು ಗ್ರಾಮಸ್ಥರ ವತಿಯಿಂದ ಹಿರಿಯ ಉದ್ಯಮಿ ದಿ‌. ಉಪೇಂದ್ರ ಕಾಮತ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ, ಹಿರಿಯ ಉದ್ಯಮಿ, ದಿ. ಕೆ. ಉಪೇಂದ್ರ ಕಾಮತ್ ಅವರಿಗೆ ಕನಕಮಜಲು ಗ್ರಾಮಸ್ಥರ ಪರವಾಗಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಕನಕಮಜಲು ಸಹಕಾರಿ ಸಂಘದ ಕನಕಸೌಧ ಸಭಾಂಗಣದಲ್ಲಿ ಮೇ.10ರಂದು ಸಂಜೆ ಜರುಗಿತು.

ಕನಕಮಜಲು ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳಾದ ವಸಂತ ಗಬ್ಬಲಡ್ಕ, ಜಯರಾಮ ರೈ ಜಾಲ್ಸೂರು, ಹರೀಶ್ ಮೂರ್ಜೆ, ಡಾ. ಗೋಪಾಲಕೃಷ್ಣ ಭಟ್ ಕಾಟೂರು, ನೇತ್ರಕುಮಾರ ಪೇರೋಳಿ, ಸಹಕಾರಿ ಸಂಘದ ಹಾಲಿ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಕನಕಮಜಲು ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಗೋಪಾಲಕೃಷ್ಣ ಕುತ್ಯಾಳ, ಶ್ರೀಧರ ಕುತ್ಯಾಳ, ಶ್ರೀ ಆತ್ಮಾರಾಮ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಈಶ್ವರ ಕೊರ್ಬಂಡ್ಕ ಅವರುಗಳು ದಿ.ಕೆ. ಉಪೇಂದ್ರ ಕಾಮತ್ ಅವರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನಕಮಜಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ದಿ. ಕೆ. ಉಪೇಂದ್ರ ಕಾಮತ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.