ಸುಳ್ಯ : ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಗುರು ಪೂಜೆ ಕಾರ್ಯಕ್ರಮದ ಅಮಂತ್ರಣ ಪತ್ರಿಕೆ ಬಿಡುಗಡೆ

0

ಸುಳ್ಯ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಯುವ ವಾಹಿನಿ ಸುಳ್ಯ ಘಟಕ, ಸುಳ್ಯ ಘಟಕದ ಬಿರುವೆರ್ ಕುಡ್ಲ ಹಾಗೂ ಸುಳ್ಯ ಬಿಲ್ಲವ ಮಹಿಳಾ ಘಟಕ ಇವುಗಳ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 3ರಂದು ಬೆಳ್ಳಾರೆಯ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಗುರು ಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಆ. 24ರಂದು ಸುಳ್ಯದ ಶೀತಲ್ ಹೋಟೆಲ್ ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಎನ್. ಎಸ್. ಡಿ.ವಿಠಲ್ ದಾಸ್, ಕಾರ್ಯದರ್ಶಿಯಾದ ನವೀನ್ ಸಾರಕೆರೆ, ಸುಳ್ಯ ಘಟಕದ ಯುವವಾಹಿನಿಯ ಸ್ಥಾಪಕಾಧ್ಯಕ್ಷ ಶಿವಪ್ರಸಾದ್. ಕೆ. ವಿ, ಯುವವಾಹಿನಿ ಸುಳ್ಯ ಘಟಕದ ಮಾಜಿ ಅಧ್ಯಕ್ಷರಾದ ಅನಿಲ್ ಪೂಜಾರಿ ಕುತ್ಯಾಡಿ, ಯುವ ವಾಹಿನಿ ಕೋಶಾಧಿಕಾರಿ ಸುನಿಲ್ ಪಟ್ಟೆ, ಶೀತಲ್ ಹೋಟೆಲ್ ಮಾಲಕ ಗಣಪ ಸಾಲ್ಯಾನ್, ಪ್ರಭಾಕರ್ ಕುತ್ಯಾಡಿ, ಭಾಸ್ಕರ್ ಬಾಜಿನಡ್ಕ, ರಮೇಶ್ ಜಯನಗರ, ಸುಂದರ ಪೂಜಾರಿ, ಶ್ರೀಮತಿ ಹರಿಣಾಕ್ಷಿ ಗಣಪ ಸಾಲ್ಯಾನ್, ಬೃಂದಾ ಪೂಜಾರಿ ಮುಕ್ಕೂರು ಉಪಸ್ಥಿತರಿದ್ದರು.