ಕರ್ಲಪ್ಪಾಡಿ ಶಾಸ್ತಾವೇಶ್ವರ ದೇವಸ್ಥಾನ : ಜಾತ್ರೋತ್ಸವ ಸಭೆ

0

ಸೇವಾ ಸಮಿತಿ‌ ಅಧ್ಯಕ್ಷರಾಗಿ ಶಿವರಾಮ ಕೇನಾಜೆ – ಕಾರ್ಯದರ್ಶಿ ಅಚ್ಚುತ ಅಟ್ಲೂರು

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಜಾತ್ರೋತ್ಸವ ಡಿಸೆಂಬರ್ ತಿಂಗಳಲ್ಲಿ ಜರುಗಲಿದ್ದು, ಪೂರ್ವ ಸಿದ್ಧತಾ ಸಭೆ ಹಾಗೂ ಸೇವಾ ಸಮಿತಿ ರಚನೆ ಇತ್ತೀಚೆಗೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ ವಹಿಸಿದ್ದರು. ಸಮಿತಿಯ ಸದಸ್ಯರು‌ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಊರವರು ಇದ್ದರು.

ಸೇವಾ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಕೇನಾಜೆ, ಪ್ರಧಾನ ಕಾರ್ಯದರ್ಶಿ ಯಾಗಿ ನಿವೃತ್ತ ಮುಖ್ಯ ಶಿಕ್ಷಕ ಅಚ್ಚುತ ಅಟ್ಲೂರು, ಕಾರ್ಯದರ್ಶಿ ಲೋಕೇಶ್ ಮಾವಿನಪಳ್ಳ, ಕೋಶಾಧಿಕಾರಿ ಕಿರಣ್ ರೈ ಬಾಡೇಲು ಮೇನಾಲ (ನಿವೃತ್ತ ಯೋಧ), ಉಪಾಧ್ಯಕ್ಷರುಗಳಾಗಿ ಹೊನ್ನಪ್ಪ ಗೌಡ ಅಡ್ಪಂಗಾಯ, ನಾರಾಯಣ ಗೌಡ ಪುತ್ತಿಲ, ರಾಘವ ಅತ್ಯಾಡಿ, ಜಲಜಾಕ್ಷಿ‌ ಕಾಂತಮಂಗಲ, ಮೋನಪ್ಪ ಗೌಡ ನಾರಾಲು, ಸುಧಾಕರ ಪಲ್ಲತಡ್ಕ, ಜಗನ್ನಾಥ ರೈ ಪಡ್ಡೈಬನ,
ಗೌರವ ಸಲಹೆಗಾರರಾಗಿ ಕಲಾವತಿ ವೆಂಕಟಕೃಷ್ಣಯ್ಯ, ನಾರಾಯಣ ರೈ ಮೇನಾಲ, ಮನಮೋಹನ ಮುಡೂರು, ಹೊನ್ನಮ್ಮ ಅಡ್ಪಂಗಾಯ, ಪದ್ಮನಾಭ ಮಾಸ್ಟರ್ ಪಡ್ಡಂಬೈಲು, ಆರ್ಥಿಕ ಸಮಿತಿಯಲ್ಲಿ ಅರುಣ್ ಕುಮಾರ್ ಪಡ್ಡಂಬೈಲು, ಬಾಲಕೃಷ್ಣ ಮಾವಜಿ, ಜನಾರ್ದನ ಕಣಕ್ಕೂರು, ಬಾಲಕೃಷ್ಣ ಕೊರಂಗುಬೈಲು, ಭಾಸ್ಕರ ಮಿತ್ತಪೇರಾಲು, ಶ್ರೀಧರ ಪಲ್ಲತಡ್ಕ, ತಿಮ್ಮಯ್ಯ ಉದ್ದಂತಡ್ಕ, ಶ್ಯಾಮ್ ಪ್ರಸಾದ್ ಮುಡೂರು, ಕಿರಣ ಮುಡೂರು, ಸಮಿತಿ ಸದಸ್ಯರುಗಳಾಗಿ ಉಮೇಶ್ ಮುಂಡೋಳಿಮೂಲೆ, ಪುಷ್ಪ ರಾಜೇಶ್ ದೊಡ್ಡೇರಿ, ರೇವತಿ ದೊಡ್ಡೇರಿ, ಜನಾರ್ದನ ನಾಯ್ಕ್ ಅಡ್ಪಂಗಾಯ, ರಮೇಶ್ ಇರಂತಮಜಲು, ರವಿರಾಜ ಕರ್ಲಪ್ಪಾಡಿ, ಎಲ್ಯಣ್ಣ ಗೌಡ ಪಡ್ಡಂಬೈಲು, ನಾರಾಯಣ ಕರ್ಲಪ್ಪಾಡಿ, ಶಿವಾನಂದ, ಮಾಧವ ಪಾಟಾಳಿ, ಬಾಲಚಂದ್ರ ಕರ್ಲಪ್ಪಾಡಿ, ಬಾಲಕೃಷ್ಣ ಮುಡೂರು ಆಯ್ಕೆಯಾದರು.