ಅರಂತೋಡು : ಮಳೆಯಿಂದ ಹಾನಿಗೊಳಗಾದ ಮನೆಯವರಿಗೆ ಧನಸಹಾಯ

0

 

 

ಮಳೆಯಿಂದ ಮನೆಗೆ ಹಾನಿಗೊಳಗಾದ ಚಂದ್ರಕಲಾ ದೇವಿಪ್ರಸಾದ್ ರವರಿಗೆ ಅರಂತೋಡು – ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಧನಸಹಾಯ ನೀಡಲಾಯಿತು.


ದೇರಾಜೆ ಚಂದ್ರಕಲಾ ದೇವಿಪ್ರಸಾದ್ ರ ಮಳೆಯಿಂದಾಗಿ ಬಿದ್ದು ಮನೆಗೆ ಅಪಾರ ಹಾನಿಯಾಗಿತ್ತು.
ಅವರಿಗೆ ಅರಂತೋಡು – ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಧನಸಹಾಯ ನೀಡಲಾಯಿತು.
ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಕಿಟ್ ಕೂಡಾ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ನಿರ್ದೇಶಕ ಕೇಶವ ಅಡ್ತಲೆ, ಬಿ ಜೆ ಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್, ಶಶಿಧರ ದೇರಾಜೆ, ಚಿತ್ರ ದೇರಾಜೆ , ಅರಂತೋಡು ಗ್ರಾ.ಪಂ ಉಪಾಧ್ಯಕ್ಷೆ ಶ್ವೇತ ಉಪಸ್ಥಿತರಿದ್ದರು.