ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್
ಇದರ ಆಶ್ರಯದಲ್ಲಿ ಆರೋಗ್ಯ ಪ್ಲಸ್ ಪಂಜ ಮತ್ತು ಮಂಗಳ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ಮಾಹಿತಿ ಶಿಬಿರ ಆ.14 ರಂದು ಪಂಜದ ಪಲ್ಲೋಡಿ ದುರ್ಗಾಪರಮೇಶ್ವರಿ ಪ್ಯೂಲ್ಸ್ ಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ *ಪವನ್ ಪಲ್ಲತ್ತಡ್ಕ ವಹಿಸಿದ್ದರು. ಪ್ರಥಮ ಚಿಕಿತ್ಸೆ ಮಾಹಿತಿಯನ್ನು ಡಾ.ಗೌರವ್ ಶೆಟ್ಟಿ ಮತ್ತು ಮಂಗಳ ಆಸ್ಪತ್ರೆ ಮಂಗಳೂರು ಇದರ ಆನಂದ್ ಮಾಹಿತಿ ನೀಡಿದರು.
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಜೀವ ರಕ್ಷಕ ಅಂಬ್ಯುಲೆನ್ಸ್ ಗೆ ದಿ.ಶ್ರೀಮತಿ ಗೀತಾ ರಮಾನಾಥ ರೈ ಹಾಗೂ ದಿ. ರಮಾನಾಥ ರೈ ಇವರ ಸ್ಮರಣಾರ್ಥ ಆರೋಗ್ಯ ಪ್ಲಸ್ ನ ಲಲಿತ್ ರೈ ಅವರು ಸ್ಪಿನ್ ಬೋರ್ಡ್ ಸ್ಟ್ರೆಚೆರ್ ಹಾಗೂ ಹೆಡ್ ರೆಸ್ಟ್ ನ್ನು ಕೊಡುಗೆ ಯಾಗಿ ನೀಡಿದರು.
ಮಾಹಿತಿ ಕಾರ್ಯಗಾರಕ್ಕೆ ಅಮರ ಸೇವಾ ಟ್ರಸ್ಟ್ ನ ಅಂಬ್ಯುಲೆನ್ಸ್ ಚಾಲಕರು, ಚೊಕ್ಕಾಡಿ ಅಂಬ್ಯುಲೆನ್ಸ್ ಚಾಲಕರು ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಂಬ್ಯುಲೆನ್ಸ್ ಚಾಲಕರು ಹಾಗೂ ಸದಸ್ಯರು ಭಾಗವಹಿಸಿದ್ದರು.