ಆ.18: ಬೊಳುಬೈಲು ನವಚೇತನ ಯುವಕ ಮಂಡಲದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ

0

ಜಾಲ್ಸೂರು ಗ್ರಾಮದ ಬೊಳುಬೈಲಿನ ನವಚೇತನ ಯುವಕಮಂಡಲದ ವತಿಯಿಂದ 28ನೇ ವರುಷದ ಶ್ರೀಕೃಷ್ಣ ಜನ್ಮಾಷ್ಣಮಿಯು ಆ.18ರಂದು ಬೊಳುಬೈಲಿನ ನವಚೇತನ ಮೈದಾನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶಿವರಾಮ ಗೌಡ ನಡುಬೆಟ್ಟು ಅವರು ಉದ್ಘಾಟಿಸಲಿದ್ದಾರೆ. ,ಅಧ್ಯಕ್ಷತೆಯನ್ನು ಯುವಕಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು ವಹಿಸಲಿದ್ದಾರೆ.ವೇದಿಕೆಯಲ್ಲಿ ನವಚೇತ‌ನ ಚಿಣ್ಣರಕೂಟದ ಅಧ್ಯಕ್ಷ ಮೊಕ್ಷೀತ್ ಆರ್ಭಡ್ಕ ಉಪಸ್ಥಿತರಿರಲಿದ್ದಾರೆ.


ನಂತರ ಸಾರ್ವಜನಿಕರಿಗೆ ವಿವಿದ ಆಟೋಟ ಸ್ವರ್ಧೆಗಳು ನಡೆಯಲಿದೆ.
ಸಂಜೆ 5ಗಂಟೆಯಿಂದ ಸಮಾರೋಪ ಸಮಾರಂಭದಲ್ಲಿ ಯುವಕಮಂಡಲದ ನಿಕಟಪೂರ್ವ ಅಧ್ಯಕ್ಷ ಸುಧೀರ್ ನೆಕ್ರಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಮುಖ ಭಾಷಣಕಾರರಾಗಿ ವಿಧಾನಪರಿಷತ್ತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಮಿನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಸುಳ್ಯ ಇದರ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಜಾಲ್ಸೂರು ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎಂ ಬಾಬು, ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಾಟೂರು,ಗೌರವ ಉಪಸ್ಥಿತಿಯಲ್ಲಿ ಯುವಕಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು ಭಾಗವಹಿಸಲಿದ್ದಾರೆ.
ಸಭಾವೇದಿಕೆಯಲ್ಲಿ ಮಾಜಿ ಸೈನಿಕ ಕ್ಯಾ. ಜನಾರ್ಧನ ರಾವ್ ಬೈತಡ್ಕ ಮತ್ತು ಲೀಫ್ ಆರ್ಟ್ ಕಲಾವಿದ ಶಶಿಕಾಂತ್ ಅಡ್ಕಾರು ಅವರಿಗೆ ನವಚೇತನ ಗೌರವ ಸನ್ಮಾನ, 2021-2022ರ ಸಾಲಿನ S.S.L.C ಅತ್ಯುನ್ನತ ಅಂಕ ಗಳಿಸಿದ ಕು.ಬಿಂದಿಯಾ ಕಾಟೂರು ಅವರಿಗೆ ನವಚೇತನ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಸಭಾಕಾರ್ಯಕ್ರಮ ನಂತರ india book of records,nobel world record ,ಯೋಗ ಬಾಲಸಾಧಕ ಮಾ. ಮೋನಿಷ್ ತಂಟೆಪ್ಪಾಡಿ‌ ಇವರಿಂದ ಯೋಗ ಪ್ರದರ್ಶನ, ನವಚೇತನ ಚಿಣ್ಣರಕೂಟದ ಕಲಾವಿದರಿಂದ ಜಾನಪದ ನೃತ್ಯ ವೈಭವ, ಕಲಾಮಾಯೆ ಫಿಲ್ಮ್ ಪ್ರಸ್ತುತಪಡಿಸುವ,,SHRI TECHNOLOGIES SULLIA ಅರ್ಪಿಸುವ ಸುಧಿರ್ ಏನೆಕಲ್ಲು ನಿರ್ದೇಶನದ ಅರೆಭಾಷೆ ಚಲನಚಿತ್ರ ಕೇಸ್ ಪುಸ್ಕ, ಮತ್ತು ವಿಜ್ಜು ವಿಠಲ್ ಸುಳ್ಯ ನಿರ್ಮಾಣದ ಗಿರೀಶ್ ಬೈತಡ್ಕ ನಿರ್ದೇಶನದ ಮಾಯ ಕಿರು ಚಲನಚಿತ್ರಗಳ‌‌ ಪ್ರದರ್ಶನ ನಡೆಯಲಿದೆ.