ದರ್ಗಾ ಬಳಿಯ ವಿವಾದಿತ ಜಾಗದಲ್ಲಿ ವಾಹನ ಪಾರ್ಕಿಂಗ್ ಗೆಂದು ಅಗೆದ ವಿಚಾರ : ಆಕ್ಷೇಪ – ಪೋಲೀಸರ ಆಗಮನ
ಅಜ್ಜಾವರ ಗ್ರಾಮದ ಮೇನಾಲದಲ್ಲಿ ದರ್ಗಾ ಸಮೀಪವಿರುವ ವಿವಾದಿತ ಜಾಗದಲ್ಲಿ ವಾಹನ ಪಾರ್ಕಿಂಗ್ ಗಾಗಿ ಮೇನಾಲದ ಕೃಷ್ಣಾಷ್ಟಮಿ ಸಮಿತಿಯವರು ಜೆಸಿಬಿಯಲ್ಲಿ ಅಗೆದ ವಿಚಾರ ದರ್ಗಾದವರ ಆಕ್ಷೇಪಕ್ಕೆ ಕಾರಣವಾಗಿ ಪೋಲೀಸರು ಹಾಗೂ ಕಂದಾಯದವರು ಸ್ಥಳಕ್ಕೆ ಆಗಮಿಸಿ ಈ ಜಾಗದ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಲು ಸೂಚನೆ ನೀಡಿರುವ ಘಟನೆ ಇಂದು ನಡೆದಿದೆ.