ಆ.30ರಂದು ಸುಳ್ಯದಲ್ಲಿ ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ನಡಿಗೆ

0

ಅಜ್ಜಾವರದಲ್ಲಿ ಪೂರ್ವಭಾವಿ ಸಭೆ

 

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಾಲ್ಸೂರಿನಿಂದ ಸುಳ್ಯದ ವರೆಗೆ ಆಗಸ್ಟ್ 30ರಂದು ನಡೆಯಲಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಆ.21 ರಂದು ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಲೀಲಾ ಮನಮೋಹನ್ ರವರ ಮನೆಯಲ್ಲಿ ನಡೆಯಿತು.

 

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ, ದಿನೇಶ್ ಅಂಬೇಕಲ್ಲು, ಮನಮೋಹನ, ಸುಧೀರ್ ರೈ ಮೇನಾಲ, ಗೋಕುಲ್ ದಾಸ್, ಸದಾನಂದ ಮಾವಜಿ, ಪ್ರಸಾದ್ ರೈ ಮೇನಾಲ, ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಜಯರಾಮ ಮುಳ್ಯ, ಶ್ರೀಮತಿ ಲೀಲಾ ಮನಮೋಹನ, ರಾಹುಲ್ ಅಡ್ಪಂಗಾಯ, ರಂಜಿತ್ ರೈ ಮೇನಾಲ, ಭವಾನಿಶಂಕರ್ ಕಲ್ಮಡ್ಕ, ಸೇರಿದಂತೆ ಗ್ರಾಮ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರು. ರವೀಶ ಮಾವಿನಪಳ್ಳಮತ್ತು ಅಬ್ಬಸ್ ಎ.ಬಿ ಕಾರ್ಯಕ್ರಮ ನಿರೂಪಿಸಿದರು.