ಶಿವಾಜಿ ಯುವಕ ಮಂಡಲ ಕೂತ್ಕುಂಜ ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಆ.21 ರಂದು ಕೂತ್ಕುಂಜ ಅಟಲ್ ‘ಜೀ ಕ್ರೀಡಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಪಂಜ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕಲ್ಲಾಜೆ ಉದ್ಘಾಟಿಸಿ ಶುಭ ಹಾರೈಸಿದರು. ಯುವಕ ಮಂಡಲದ ಅಧ್ಯಕ್ಷ ಉಜ್ವಲ್ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು.
*ಸಮರೋಪ ಸಮಾರಂಭ* :
ಸಮರೋಪ ಸಮಾರಂಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಉಜ್ವಲ್ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪ್ರಗತಿಪುರ ಕೃಷಿಕ ಭವಾನಿ ಶಂಕರ ದೇರಪ್ಪಜನ ಮನೆ, ಉದ್ಯಮಿ ರಾಧಾಕೃಷ್ಣ ಪೈಸಾರಿ, ಶ್ರೀಮತಿ ವಿಮಲಾ ಉದಯಕುಮಾರ್ ಚಿದ್ಗಲ್ಲು,ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗಿಶ್ ಚಿದ್ಗಲ್ಲು,
ಕಾರ್ಯಕ್ರಮ ಸಂಯೋಜಕ ಷಣ್ಮುಖ ಕಲ್ಲಾಜೆ
ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಆದಿತ್ಯ ಚಿದ್ಗಲ್ಲು ಸ್ವಾಗತಿಸಿದರು.ಷಣ್ಮುಖ ಹೊಸೊಕ್ಲು ನಿರೂಪಿಸಿದರು.ಆದರ್ಶ ಚಿದ್ಗಲ್ಲು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ಶೈಲೇಶ್ ವಂದಿಸಿದರು.