ಕಲ್ಮಡ್ಕ :ಚಿಗುರು ನವೋದಯ ಸ್ವ-ಸಹಾಯ ಗುಂಪು ಉದ್ಘಾಟನೆ

0

 

 

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ
ನೂತನವಾಗಿ ರಚನೆಗೊಂಡ ‘ಚಿಗುರು’ ನವೋದಯ ಸ್ವ-ಸಹಾಯ ಗುಂಪು ಉದ್ಘಾಟನೆ ಗೊಂಡಿತು.
ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟರವರು ನೂತನ ಗುಂಪುಗೆ ಪುಸ್ತಕ ಹಸ್ತಾಂತರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಜೆ, ಕಲ್ಮಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಮೂರ್ತಿ, ನವೋದಯ ಸಂಘಗಳ ಪ್ರೇರಕ ಗಂಗಾಧರ ಪೊಳೆಂಜ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ದೀಪಕ್ ಯಚ್, ಕಾರ್ಯದರ್ಶಿಯಾಗಿ ಉದಯಕುಮಾರ್ ಯಚ್ , ಸದಸ್ಯರಾಗಿ ದಿನೇಶ್ ಎ, ಮೋನಪ್ಪ,ಮಲ್ಲೇಶ ಎ, ಯೋಗೀಶ್, ಪ್ರದೀಪ್ ಎಸ್ ಆಯ್ಕೆಯಾದರು.