ಅ. 02ರಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಪುತ್ತೂರು ಗೃಹರಕ್ಷಕದಳದ ಕಚೇರಿಗೆ ಭೇಟಿ ನೀಡಿ, ವಾರದ ಕವಾಯತನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇವರ ವತಿಯಿಂದ ಜಗನ್ನಾಥ್ ಹಾಗೂ ಸುದರ್ಶನ್ ಜೈನ್ ಅವರನ್ನು ಫಲ ಪುಷ್ಪ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.