ಸುಬ್ರಹ್ಮಣ್ಯ:ನಾಗದೀಪ ಎಲೆಕ್ಟ್ರಾನಿಕ್ಸ್ ಆ್ಯಂಡ್ ಎಲೆಕ್ಟ್ರಿಕಲ್ಸ್ ಶುಭಾರಂಭ

0

 

ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ನಾಗದೀಪ ಎಲೆಕ್ಟ್ರಾನಿಕ್ಸ್ ಆ್ಯಂಡ್ ಎಲೆಕ್ಟ್ರಿಕಲ್ಸ್ ಅ.14 ರಂದು ಶುಭಾರಂಭಗೊಂಡಿತು.

ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಕೃಷ್ಣ ಶರ್ಮ ಅವರು ದೀಪ ಬೆಳಗಿಸಿ ಅಂಗಡಿಯನ್ನು ಉದ್ಘಾಟಿದರು. ಈ ಸಂದರ್ಭ ಗ್ರಾಂ.ಪಂ ಸದಸ್ಯ ಹರೀಶ್ ಇಂಜಾಡಿ, ಉದ್ಯಮಿ ಯಜ್ಞೇಶ್ ಆಚಾರ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ರಾಜೀವಿ ಆರ್ ರೈ, ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ವಿಮಲ ರಂಗಯ್ಯ, ಶೋಬಾ ನಲ್ಲೂರಾಯ, ಡಾ. ರವಿ ಕಕ್ಕೆಪದವು, ಸರ್ವೋತ್ತಮ ಕಾಮತ್, ಮುರಳಿ ಕಾಮತ್, ಸುಧಾಕರ ಕಾಮತ್, ವೀಣಾ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.