ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜ.8 ರಂದು ಸಚಿಚ ಎಸ್.ಅಂಗಾರರ ನೇತೃತ್ವದಲ್ಲಿ ಗುದ್ದಲಿಪೂಜೆ ನಡೆಯಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ತಿಳಿಸಿದ್ದಾರೆ.
ಜ.8 ಆದಿತ್ಯವಾರ ಸಂಜೆ ಗಂಟೆ 4.30ಕ್ಕೆ ನಮ್ಮ ಸುಳ್ಯ ಕ್ಷೇತ್ರದ ಶಾಸಕರು, ಮೀನುಗಾರಿಕೆ, ಬಂದರು ಸಚಿವರಾದ ಎಸ್. ಅಂಗಾರ ರವರ ನೇತೃತ್ವದಲ್ಲಿ 3 ಕೋಟಿ ವೆಚ್ಚದಲ್ಲಿ ಬಹು ನಿರೀಕ್ಷೆಯ ಆರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿಗೆ ಅಡ್ತಲೆ ಜಂಕ್ಷನ್ (ವೈ.ಎಂ.ಕೆ) ನಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಆದುದರಿಂದ ಈ ಭಾಗದ ನಾಗರೀಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹರೀಶ್ ಕಂಜಿಪಿಲಿ ವಿನಂತಿಸಿದ್ದಾರೆ.