ಕನಕಮಜಲು: ಶ್ರೀ ಆತ್ಮಾರಾಮ ದೇವರ ಸುವರ್ಣ ಸಂಭ್ರಮ ಭಜನೋತ್ಸವದ ಪ್ರಯುಕ್ತ ಮನೆಮನೆ ಭಜನೆ

0

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಸುವರ್ಣ ಸಂಭ್ರಮ ಭಜನೋತ್ಸವದ ಪ್ರಯುಕ್ತ ಮನೆ ಮನೆ ಕೇಂದ್ರ ಭಜನಾ ಕಾರ್ಯಕ್ರಮವು ಜ.24ರಿಂದ ಪ್ರಾರಂಭಗೊಂಡಿದ್ದು, ಮೂರ್ಜೆ ಬಾಲನಿಲಯದಲ್ಲಿ ಭಜನಾ ಕಾರ್ಯಕ್ರಮವು ಜ.27ರಂದು ರಾತ್ರಿ ಜರುಗಿತು.


ಕನಕಮಜಲು ಗ್ರಾಮದ ಮೂರ್ಜೆ, ನರಿಯೂರು, ಕನ್ನಡ್ಕ, ಕಜೆಗದ್ದೆ, ಕನ್ನಡ್ಕಮೂಲೆ, ಗುಳಿಗನಮೂಲೆ ವ್ಯಾಪ್ತಿಯ ಮನೆ ಮನೆ ಕೇಂದ್ರ ಭಜನಾ ಕಾರ್ಯಕ್ರಮವು ಕನಕಕಲಾ ಗ್ರಾಮದ ಬಾಲನಿಲಯ ರಾಧಾಕೃಷ್ಣ ಮೂರ್ಜೆ ಅವರ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮೂರ್ಜೆ, ನರಿಯೂರು, ಕನ್ನಡ್ಕ, ಕಜೆಗದ್ದೆ, ಕನ್ನಡ್ಕಮೂಲೆ, ಗುಳಿಗನಮೂಲೆ ವ್ಯಾಪ್ತಿಯ ಭಜಕ ಭಕ್ತಾದಿಗಳು ಉಪಸ್ಥಿತರಿದ್ದರು.