ಜನತಾದಳ ಪಕ್ಷದ ಉಬರಡ್ಕ ಗ್ರಾಮ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಸಭೆಯು ಮಾ.20 ರಂದು ಪಕ್ಷದ ಮುಖಂಡ ರೋಹನ್ ಪೀಟರ್ ನಿವಾಸದಲ್ಲಿ ನಡೆಯಿತು. ತಾಲೂಕು ಘಟಕದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸ್ಪರ್ಧೆಯ ಕುರಿತು ಚರ್ಚೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ರೋಹನ್ ಪೀಟರ್, ರಾಮಚಂದ್ರ ಗೌಡ, ರಾಘವ, ಆನಂದ, ಹುಕ್ರಪ್ಪ, ರಾಜೇಶ್ ಎಸ್. ಎನ್. ಮೊದಲಾದವರು ಇದ್ದರು.