ಪಾತಿಕಲ್ಲು ಹರಿಶ್ಚಂದ್ರರ ಮನೆಗೆ ಧರ್ಮಪಾಲನಾಥ ಸ್ವಾಮೀಜಿ ಭೇಟಿ

0

ಮಂಡೆಕೋಲು ಶ್ರೀ ಮಹಾವಿಷ್ಣು ಮುರ್ತಿ ದೇವಸ್ಥಾನಕ್ಕೆ ಆಗಮಿಸಿದ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಯವರು ಕಾರ್ಯಕ್ರಮ ಮುಗಿಸಿ, ಪಾತಿಕಲ್ಲು ಹರಿಶ್ಚಂದ್ರ- ಶ್ರೀಮತಿ ವಿನುತಾ ದಂಪತಿ ಮನೆಗೆ ಆಗಮಿಸಿದರು.

ಸ್ವಾಮೀಜಿಯವರ ಬರಮಾಡಿಕೊಂಡ ಶ್ರೀಮತಿ ವಿನುತಾ- ಹರಿಶ್ಚಂದ್ರ ದಂಪತಿ ಹಾಗೂ‌ ಪುತ್ರ ಮಿಲನ್ ಪಾತಿಕಲ್ಲು ಪಾದಪೂಜೆ ಮಾಡಿದರು. ಈ‌ ವೇಳೆ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಶ್ರೀಮತಿ ಲತಾ ಸದಾನಂದ, ಅರೆಭಾಷೆ ಅಕಾಡೆಮಿ ಸದಸ್ಯ ಡಾ.ಎನ್.ಎ.ಜ್ಞಾನೇಶ್, ಡಾ.ಸಾಯಿಗೀತಾ ಜ್ಞಾನೇಶ್, ಹಿರಿಯರಾದ ಚಂದಪ್ಪ ಗೌಡ ಪಾತಿಕಲ್ಲು, ಕರುಣಾಕರ ಗೌಡ ಪಾತಿಕಲ್ಲು, ಪಾತಿಕಲ್ಲು ತರವಾಡುಮನೆಯ ಪುರುಷೋತ್ತಮ ಪಾತಿಕಲ್ಲು ಇದ್ದರು.

ಊಟ ಮಾಡಿದ ಬಳಿಕ ಸ್ವಾಮೀಜಿ ಮಂಗಳೂರಿಗೆ ತೆರಳಿದರು.